ಹೊಂಬೇಗೌಡ ನಗರ ವಾರ್ಡ್ ಸಂಖ್ಯೆ 145, ಸುಧಾಮನಗರ 1ನೇ ಮುಖ್ಯ ರಸ್ತೆಯ ಮುಕ್ಕಾಲು ಭಾಗ ರಸ್ತೆಯನ್ನು ಕಸದ ರಾಶಿ ಆಕ್ರಮಿಸಿಕೊಂಡಿದೆ. ಹಲವಾರು ಬಾರಿ ಸಂಬಂಧಪಟ್ಟವರಲ್ಲಿ ವಿನಂತಿಸಿಕೊಂಡರೂ ಇದರತ್ತ ಗಮನ ನೀಡದೇ ಇರುವುದರಿಂದ ಸುತ್ತಮುತ್ತಲಿನ ಜನರು ಈಗಾಗಲೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಇದೇ ಬಡಾವಣೆಯ ಇನ್ನೊಂದು ಭಾಗದ (ಲಾಲ್ಬಾಗ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಬಳಿ) ಕಸದ ಚಿತ್ರವನ್ನು ಕುಂದು ಕೊರತೆ ವಿಭಾಗದಲ್ಲಿ ಪ್ರಕಟಿಸಿದ ಫಲಶ್ರುತಿಯೆಂಬಂತೆ ಅಲ್ಲಿ ಕಸದ ಸಮಸ್ಯೆಯನ್ನು ನಿವಾರಿಸಲಾಯಿತು. ಆದರೆ, ಸುತ್ತಲೂ ಜನವಸತಿಯಿಂದ ಕೂಡಿರುವ ಈ ಭಾಗದ ಕಸದ ಸಮಸ್ಯೆ, ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಮುಕ್ತಿ ಎಂದು ಕಾಣಿಸುವರೋ?