ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ರೀಪ್ರಕಾಶ್ ಅವರು, ‘ಹಳ್ಳಿಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಮಾಡಬೇಕೆಂದು, ಮಾಡದವರಿಗೆ ₨ 10 ಲಕ್ಷ ದಂಡ ಹಾಕುವ ಆದೇಶ ಸರಿಯಲ್ಲ. ಹಾಗೆ ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವುದನ್ನು ವೈದ್ಯರ ಇಷ್ಟಕ್ಕೆ ಬಿಡಬೇಕು’ ಎಂದಿದ್ದಾರೆ.
ಸರ್ಕಾರಿ ಕೋಟಾದ ಸೀಟು ಪಡೆದು ಜನರ ತೆರಿಗೆ ಹಣದಲ್ಲಿ ವೈದ್ಯರಾದವರು ಒಂದು ವರ್ಷವಾದರೂ ಹಳ್ಳಿಗಳಲ್ಲಿ ಸೇವೆ ಮಾಡಲೇಬೇಕೆಂಬ ಆದೇಶ ಜನಪರವಾದದ್ದು; ‘ಸೇವೆ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಿ’ ಎಂದು ಹೇಳ-ಬೇಕಾದ ಸ್ಥಾನದಲ್ಲಿರುವವರು ಸರ್ಕಾರದ ಆದೇಶಕ್ಕೆ ವಿರುದ್ಧವಾದ ಹೇಳಿಕೆ ನೀಡುವುದು ಸರಿಯಲ್ಲ. ಸ್ವಇಚ್ಛೆಯಿಂದ ವೈದ್ಯರು ಹೋಗದೆ ಇರುವುದರಿಂದಲೇ ಆದೇಶ ಮಾಡಬೇಕಿದೆ.