ಇದು ಕೆಂಗೇರಿ ಉಪನಗರದ ಬೀದಿ ಬೀದಿಗಳಲ್ಲೂ ಕಂಡುಬರುವ ಸಾಮಾನ್ಯ ದೃಶ್ಯ! ಅದಕ್ಕೆ ಆಸ್ಪತ್ರೆ ಮಂದಿರ ಎಂಬ ಭೇದವಿಲ್ಲ. ಮೂಲೆಮೂಲೆಯಲ್ಲೂ ಕಸ ತುಂಬಿ ದುರ್ನಾತ ಹರಡುತ್ತದೆ.
ಈ ಬಗ್ಗೆ ನಗರ ಸಭಾ ಸದಸ್ಯರ ಗಮನಕ್ಕೆ ತಂದರೆ ಪಾಪ ಅವರು ಕೂಡಲೇ ಗಮನ ಹರಿಸುತ್ತಾರೆ. ತಕ್ಷಣ ಕಸದ ಗಾಡಿ ಬಂದು ಮನೆಗಳ ಮುಂದೆ ನಿಲ್ಲುತ್ತದೆ. ಬೀದಿ ಸ್ವಚ್ಛಗೊಳ್ಳುತ್ತದೆ.
ಆದರೆ ಇದು ಎರಡು ದಿನ ಮಾತ್ರ! ಮತ್ತೆ ಯಥಾ ಸ್ಥಿತಿ! ಪುನಃ ನಗರ ಸಭಾ ಸದಸ್ಯರಿಗೆ ಫೋನು! ಅವರಿಂದ ಭರವಸೆ. ಪ್ರತೀ ಬಾರಿ ನಾವು ಕರ್ತವ್ಯವನ್ನು ನೆನಪಿಸುವದಾದರೆ ಸಂಬಂಧಪಟ್ಟ ಅಧಿಕಾರಿಗಳ ಇಲಾಖೆಗಳ ಅವಶ್ಯಕತೆಯಾದರೂ ಏನು?