ಬಾಪೂಜಿನಗರ 2ನೇ ಹಂತದಲ್ಲಿ 4ನೇ ಮುಖ್ಯರಸ್ತೆ ರೈಲ್ವೆ ಗೇಟ್ ಎದುರು ರಸ್ತೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಜಲಮಂಡಳಿಯ ಪೈಪುಗಳು ಒಡೆದು ಪದೇಪದೇ ನೀರು ಪೋಲಾಗುತ್ತಿತ್ತು. ಇದನ್ನು ತಡೆಗಟ್ಟಲು ಜಲಮಂಡಳಿಯವರು ಗುಂಡಿಯನ್ನು ತೆರೆದಿದ್ದರು.
ಕೆಲಸ ಮುಗಿದು ಇಷ್ಟು ತಿಂಗಳಾದರೂ ಬಿಬಿಎಂಪಿಯವರು ರಸ್ತೆಯನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಅಕ್ಕಪಕ್ಕದ ಮನೆಯವರು, ಅಂಗಡಿಯವರು ದೂಳಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸಬೇಕು.