ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ.194ಕ್ಕೆ ಸೇರಿದ ವೆಂಕಟೇಶ್ವರ ಲೇಔಟ್ನ ವಿದ್ಯಾಕಿರಣ ಪಬ್ಲಿಕ್ ಸ್ಕೂಲ್ ಬಳಿಯ 7ನೇ ಅಡ್ಡರಸ್ತೆಯಲ್ಲಿರುವ ಚರಂಡಿ ಒಳಗೆ ಕಲ್ಲು, ಮಣ್ಣು, ಪ್ಲಾಸ್ಟಿಕ್ ಕವರ್ಗಳು ತುಂಬಿಕೊಂಡಿವೆ. ಗೃಹ ಬಳಕೆಯ ತ್ಯಾಜ್ಯ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೆ ರಸ್ತೆಯ ಮೇಲೆಲ್ಲಾ ಹರಿದು ಸ್ಥಳೀಯ ನಿವಾಸಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.
ರಸ್ತೆಯ ಮೇಲೆಲ್ಲಾ ಹಾರಾಡುವ ಪ್ಲಾಸ್ಟಿಕ್ ಕವರ್ಗಳು ಮನೆಗಳಿಗೂ ದಾಳಿಯಿಡುತ್ತಿವೆ. ಈ ಚರಂಡಿಯನ್ನು ಸ್ವಚ್ಛಗೊಳಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿ ಮನವಿ.