ವಿಶ್ವ ಮಾನವನಿಗೆ ಜಾತಿ ಸಂಕೋಲೆ (ವಾ.ವಾ. ಏಪ್ರಿಲ್ 30 ) ಬರಹ ಅರ್ಥಗರ್ಭಿತ.ಆದರೆ ಜಾತಿ ಸಂಕೋಲೆ ಕುವೆಂಪು ಒಬ್ಬರನ್ನೇ ಅಲ್ಲ, ಶ್ರೀಕೃಷ್ಣ, ವಾಲ್ಮೀಕಿ, ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್ ವರೆಗೂ ಮಹಾನ್ ನಾಯಕರನ್ನು ಜಾತಿಯ ಸಂಕೋಲೆ ಬಾಧಿಸಿದೆ.
ಈ ವ್ಯಕ್ತಿಗಳ ಪೇಟೆಂಟ್ ತೆಗೆದು ಕೊಂಡವರ ತರಹ ವರ್ತಿಸುವ ಕೆಲವು ನಾಯಕರು, ಅವರ ವಿಚಾರ ಧಾರೆ ಅನುಸರಿಸುವ ವಿಚಾರದಲ್ಲಿ ಮಾತ್ರ ತದ್ವಿರುದ್ಧವಾಗಿ ವರ್ತಿಸುತ್ತಾರೆ. ಇದೇ ನಮ್ಮ ದೇಶದ ದುರಂತ. ಜಾತಿ ಹೆಸರಲ್ಲಿ ಮಹಾನ್ ನಾಯಕರ ಹೆಸರಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ನಮ್ಮ ಜನ.