ಬಾಲ್ಯ ವಿವಾಹದಲ್ಲಿ
ಭಾಗಿಯಾಗುವವರಿಗೂ
ಇನ್ನು ಮುಂದೆ ಉಂಟಂತೆ ಜೈಲು.
ಇದಕ್ಕಾಗಿ ಕಾಯ್ದೆಗೆ ತಿದ್ದುಪಡಿ
ತರಲು ರಾಜ್ಯ ಸಂಪುಟ
ಇಡಲಿದೆಯಂತೆ ದಾಪುಗಾಲು.
ಹಾಗಾದರೆ ಸಾಮೂಹಿಕ
ವಿವಾಹಗಳಲ್ಲಿ ಭಾಗವಹಿಸುವ
ರಾಜಕೀಯ ಧುರೀಣರು ಇನ್ನು
ಮುಂದೆ ಆಗಬೇಕಿದೆ ಹುಷಾರು.
ಬಹುಶಃ ಇನ್ನು ಮುಂದೆ
ವಿವಾಹ ಸಮಾರಂಭಗಳಲ್ಲಿ
ಎದ್ದು ಕಾಣಬಹುದು
ಇವರ ‘ಗೈರು’.