ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಯಶವಂತಪುರ ವಾರ್ಡ್ ನಂ.37ರಲ್ಲಿ ರೈಲ್ವೇ ನಿಲ್ದಾಣದ ಬಳಿ ಇರುವ ಮಾರುಕಟ್ಟೆಯ ತೊಟ್ಟಿಯಲ್ಲಿ ದಿನನಿತ್ಯ ಹಸಿ ಕಸ, ಒಣ ಕಸ ಸೇರಿ ಅಗತ್ಯಕ್ಕಿಂತ ಜಾಸ್ತಿ ಕಸ ಸುರಿಯುತ್ತಿರುವುದರಿಂದ ಕಸ ಕೊಳೆತು ನಾರುತ್ತಿದೆ. ಕಸದ ತೊಟ್ಟಿ ಶುಚಿಗೊಳಿಸುವ ಕೆಲಸವೂ ನಡೆಯುತ್ತಿಲ್ಲ. ದಿನವೂ ಈ ಕಸವನ್ನು ಸ್ಥಳಾಂತರಿಸುವ ಕೆಲಸವೂ ಆಗುತ್ತಿಲ್ಲ.
ಇದರಿಂದ ಕಸವೆಲ್ಲಾ ರಸ್ತೆಯಲ್ಲಿ ಹರಡಿ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿ ಮಾರುಕಟ್ಟೆಗೆ ಬರುವ ಸಾರ್ವಜನಿಕರು ಸ್ಥಳೀಯರು, ರಸ್ತೆ ಬದಿಯ ವ್ಯಾಪಾರಿಗಳು ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗುವ ಭೀತಿ ಹೆಚ್ಚಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು.