ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮೊದಲೇ ಇಂತಹ ಸಂಸ್ಥೆಗಳು ಅವರಿಗೆ ಹೀಗೆ ಉದಾರವಾಗಿ ದಾನ ನೀಡಿವೆಯೇ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೂ ಹೀಗೆ ಕೋಟ್ಯಂತರ ರೂಪಾಯಿ ದಾನ ಕೊಟ್ಟಿವೆಯೇ? ಯಡಿಯೂರಪ್ಪ ಮಕ್ಕಳು, ಅಳಿಯಂದಿರ ಟ್ರಸ್ಟ್ಗಳು ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿವೆಯೇ? ಅಥವಾ ಕಿವುಡ, ಮೂಗರು, ಅಂಗವಿಕಲರು, ವಿಧವೆಯರಿಗೆ ಸಹಾಯ ಮಾಡಿದ ಉದಾಹರಣೆ ಇದೆಯೇ?
ಈ ದೇಶವನ್ನು ಲೂಟಿ ಹೊಡೆದ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ಅಕ್ರಮ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ, ನಮ್ಮ ಕಟ್ಟ ಕಡೆಯ ಭರವಸೆಯ ನ್ಯಾಯಾಲಯಗಳಾದರೂ ಇನ್ನಷ್ಟು ಸತ್ಯಶೋಧಕವಾಗಿ, ನಿರ್ದಾಕ್ಷಿಣ್ಯವಾಗಿ, ವಿಚಾರಣೆ ನಡೆಸಿ ಶಿಕ್ಷಿಸದಿದ್ದರೆ ಖಂಡಿತಾ ನಮ್ಮ ದೇಶಕ್ಕೆ ಭವಿಷ್ಯವಿಲ್ಲ.