ಪ್ರತಿಷ್ಠೆಯ ಕ್ಷೇತ್ರ ಹೆಬ್ಬಾಳದಲ್ಲಿ
ಆಡಳಿತ ಪಕ್ಷದ ಪರಾಭವ
ಇದು ಅಸಮರ್ಥ ಆಡಳಿತದ ಪ್ರಭಾವ
ಅಧಿಕಾರಕ್ಕಾಗಿ ಪಕ್ಷದೊಳಗಿನ ಕಿತ್ತಾಟ
ಕೆಲವರ ಸರ್ವಾಧಿಕಾರ ಗುಣದ ಆರ್ಭಟ
ಅಗತ್ಯ ವಸ್ತುಗಳ ಬೆಲೆ ಏರಿಕೆ
ಸಂಪುಟ ಪುನಾರಚನೆ ಮುಂದೂಡಿಕೆ
ಹೀಗೇ ಇದೆಯಲ್ಲಾ ಸ್ವಾಮಿ, ಪಕ್ಷದ
ಹಿನ್ನಡೆಗೆ ಎಷ್ಟೊಂದು ಕಾರಣ...
ಹೀಗೆಯೇ ಸಾಗಿದರೆ, ಮುಂದಿನ
ಚುನಾವಣೆಯಲ್ಲಿ ಆಡಳಿತ ಪಕ್ಷದ
ಸ್ಥಿತಿ ಆದೀತು ದಾರುಣ