ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ನೀರು ಒದಗಿಸುವ ಕೆಲಸಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಶೇಷ ಗಮನ ಕೊಡಬೇಕು. ಸ್ಥಳೀಯ ಕ್ಷೇತ್ರಾಭಿವೃದ್ಧಿಗೆ ಒದಗಿಸುವ ನಿಧಿಯ ಅರ್ಧದಷ್ಟು ಮೊತ್ತ ಕುಡಿಯುವ ನೀರಿನ ಬವಣೆ ನಿವಾರಿಸುವ ಕೆಲಸಗಳಿಗೆ ಬಳಕೆಯಾಗಲಿ. ಇದಕ್ಕೆ ನಮ್ಮ ಸಂಸದರು, ಶಾಸಕರು ಸಹಮತ ಸೂಚಿಸಲಿ.
ಕಮಿಷನ್ ದಂಧೆಯ ಕೆಲಸಗಳನ್ನು ಬದಿಗಿಟ್ಟು ಕುಡಿಯುವ ನೀರು ಪೂರೈಕೆ ಕೆಲಸಗಳು ಆದ್ಯತೆ ಪಡೆಯಲಿ. ಶುದ್ಧ ಕುಡಿಯುವ ನೀರು ಪಡೆಯುವುದು ಪ್ರತಿಯೊಬ್ಬರ ಹಕ್ಕು. ಮುಂದಿನ ಐದು ವರ್ಷಗಳಲ್ಲಿ ಅದನ್ನು ದೊರಕಿಸಿಕೊಡುವುದು ಸಾಧ್ಯವಾದರೆ ಅದೇ ಮಹಾ ಭಾಗ್ಯ.