ದೇವದಾಸಿ ಪದ್ಧತಿ ಹೀನವಾದುದು. ಇದು ಉತ್ತರ ಕರ್ನಾಟಕದ ಕೆಲವೆಡೆ ಇನ್ನೂ ಜೀವಂತವಾಗಿರುವುದರಿಂದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ.
ಇಂಥ ರೂಢಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಆದೇಶಿಸಿರುವುದು ಸ್ವಾಗತಾರ್ಹ. ಅಂತೆಯೇ ಇದರಿಂದ ಬಳಲಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಪತ್ರ ಬರೆದಿರುವುದು ಸಂತಸದ ಸಂಗತಿ. ಈ ಅನಿಷ್ಟ ಪದ್ಧತಿಯನ್ನು ಪೂರ್ತಿ ತೊಡೆದುಹಾಕಬೇಕಿದೆ.