ಜನಪ್ರತಿನಿಧಿಗಳು ವಿಧಾನಸಭೆಯ ಕಲಾಪವನ್ನು ವೈಯಕ್ತಿಕ ಸಂಗತಿಗಳಿಗಾಗಿ ಎಳೆದಾಡುತ್ತಿರುವುದು ಎಷ್ಟು ಸರಿ?
ಕಳಸಾ ಬಂಡೂರಿ ಯೋಜನೆ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಬರಗಾಲ, ರೈತರ ಬವಣೆ ಇವು ಯಾವುವೂ ಇವರಿಗೆ ಕಾಣಿಸುತ್ತಿಲ್ಲವೇ?
ಶಾಸಕರು ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಜನರ ಬವಣೆಗೆ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸ್ಪಂದಿಸಲಿ, ಕಲಾಪ ಸುಗಮವಾಗಿ ಸಾಗಲು ಸಹಕರಿಸಲಿ.