ರಾಜರಾಜೇಶ್ವರಿ ನಗರ ಲಗ್ಗೆರೆ ವಲಯದ ಚೌಡೇಶ್ವರಿ ನಗರಕ್ಕೆ ಸಿಟಿ ಮಾರ್ಕೆಟ್ನಿಂದ 267, ಮೆಜೆಸ್ಟಿಕ್ನಿಂದ 267ಎ, ಶಿವಾಜಿನಗರದಿಂದ 267ಬಿ ಬಸ್ಸುಗಳು ಬರುತ್ತಿದ್ದವು. ಈ ಮೂರು ಮಾರ್ಗಗಳ ಬಸ್ಸುಗಳು ಕಳೆದ ಎರಡು ತಿಂಗಳಿನಿಂದ ಚೌಡೇಶ್ವರಿನಗರ ಬಸ್ ನಿಲ್ದಾಣಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟಿವೆ.
ಈಚೆಗೆ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ಪ್ರತಿದಿನವೂ ಮಳೆ, ಬಿಸಿಲು ಎನ್ನದೆ ತಮ್ಮ ಬೆನ್ನುಗಳ ಮೇಲೆ ಮಣಬಾರದ ಪುಸ್ತಕಗಳ ಬ್ಯಾಗ್ಗಳನ್ನು ಹೊತ್ತುಕೊಂಡು 2–3 ಕಿ.ಮೀ. ದೂರ ನಡೆದುಕೊಂಡು ಲಗ್ಗೆರೆ ನೂತನ ಬಸ್ಸು ನಿಲ್ದಾಣ ತಲುಪಿ, ಅಲ್ಲಿಂದ ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರದ ಕಡೆಗೆ ಹೋಗುವ ಬಸ್ಸುಗಳಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕಾಗಿದೆ.
ಜೊತೆಗೆ ಗಾರ್ಮೆಂಟ್ಸ್ ನೌಕರರು, ಹಿರಿಯ ನಾಗರಿಕರು ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಈಗಲಾದರೂ ಸಾರಿಗೆ ಸಚಿವರು, ಬಿ.ಎಂ.ಟಿ.ಸಿ.ಯ ಹಿರಿಯ ಅಧಿಕಾರಿಗಳು ಶಾಲಾ ಮಕ್ಕಳ ಮೇಲೆ ಕರುಣೆ ತೋರಿ, ನಾಗರಿಕ ಸೇವೆಯ ಹಿತದೃಷ್ಟಿಯಿಂದ ಮೇಲಿನ ಮೂರು ಮಾರ್ಗಗಳ ಬಸ್ಸುಗಳ ಸಂಚಾರ ವ್ಯವಸ್ಥೆಯನ್ನು ಚೌಡೇಶ್ವರಿ ನಗರಕ್ಕೆ ಬಂದು ಹೋಗುವಂತೆ