ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಶೆಲ್ಟರ್‌ ನಿರ್ಮಿಸಿ

ಕುಂದು ಕೊರತೆ
Last Updated 22 ಮಾರ್ಚ್ 2016, 11:45 IST
ಅಕ್ಷರ ಗಾತ್ರ

ಜೆ.ಪಿ. ನಗರ 15ನೇ ಕ್ರಾಸ್‌ ಬಸ್‌ ನಿಲ್ದಾಣದಿಂದ ಜಯನಗರ 4ನೇ ಬ್ಲಾಕ್‌, ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರ ಮೊದಲಾದ ಸ್ಥಳಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಈ ನಿಲ್ದಾಣದಲ್ಲಿ ತಂಗುದಾಣ ಇಲ್ಲ. ಈ ಜಾಗದಲ್ಲಿ ನಿಂತು ಬಸ್‌ಗೆ ಕಾಯುವವರು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ಕಷ್ಟಪಡಬೇಕಾಗಿದೆ.

ಇನ್ನು ಹೆಂಗಸರು, ಮಕ್ಕಳು, ವಯೋವೃದ್ಧರ ಸ್ಥಿತಿಯನ್ನು ಹೇಳುವಂತೆಯೇ ಇಲ್ಲ. ಹಾಗಾಗಿ, ಪ್ರಯಾಣಿಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ತುರ್ತಾಗಿ ಶೆಲ್ಟರ್‌ ನಿರ್ಮಿಸಬೇಕಾಗಿದೆ.

ತಾತ್ಕಾಲಿಕವಾಗಿ ಪೆಂಡಾಲ್‌ ವ್ಯವಸ್ಥೆಯನ್ನಾದರೂ ಮಾಡುವುದು ಒಳಿತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈ ನಿಲ್ದಾಣದಲ್ಲಿ ಸೂಕ್ತ ಬಸ್‌ ಶೆಲ್ಟರ್‌ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT