ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ಹಾವಳಿ

ಕುಂದು ಕೊರತೆ
Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ಬೀದಿನಾಯಿಗಳು ಆರು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಸುದ್ದಿ ನಾಗರಿಕರಲ್ಲಿ ನಡುಕ ತಂದಿತ್ತು. ಕಳೆದ ವಾರ ವಿಧಾನಸೌಧದ ಮುಂದಿರುವ ರಸ್ತೆಯಲ್ಲಿಯೇ ವಿದೇಶಿ ಹಾಗೂ ಸ್ವದೇಶಿ ಮ್ಯಾರಥಾನ್‌ ಓಟಗಾರರಿಗೆ ತೊಂದರೆ ಕೊಟ್ಟ ಸಚಿತ್ರ ಸುದ್ದಿ ಪ್ರಕಟವಾಗಿತ್ತು. ಇಷ್ಟಾದರೂ ಬಿಬಿಎಂಪಿ ಬೀದಿನಾಯಿ ಪ್ರೇಮ ಇನ್ನೂ ಕಡಿಮೆಯಾಗಿಲ್ಲ.

ಬಿಬಿಎಂಪಿ ಪ್ರತಿವರ್ಷ ಬೀದಿನಾಯಿಗಳ ಸಂತಾನಹರಣಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಆದರೂ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮಿರಿದೆ. ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಕೊಡುವ ಬೀದಿನಾಯಿಗಳ ಹಾವಳಿ ತಪ್ಪಿಸಿ ಬಿಬಿಎಂಪಿ ಯಾವ ಹೊಸ ಕ್ರಮ ಕೈಗೊಂಡಿದೆ?

ಬೀದಿಬದಿಯ ತಿಂಡಿ ಹೋಟೆಲುಗಳು, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯೇ ಬೀದಿನಾಯಿಗಳಿಗೆ ಆಕರ್ಷಣೆ. ಬಿಬಿಎಂಪಿ ಈ ಅಂಶ ಗಮನಿಸಬಾರದೆ? ಬೀದಿನಾಯಿಗಳ ಹಾವಳಿ ಯಾವ ಕ್ರಮಗಳನ್ನು ಕೈಗೊಂಡಿದೆ ಎನ್ನುವ ನಾಗರಿಕರ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT