ಹಾಗೆಂದು ಉಳಿದ ವಿ.ವಿ.ಗಳು ಸಾಚಾ ಅಲ್ಲ. ಕರ್ನಾಟಕದ ಭಾಗಶಃ ಎಲ್ಲ ವಿ.ವಿ.ಯ ಪರೀಕ್ಷೆ ಮತ್ತು ಮೌಲ್ಯಮಾಪನ ವ್ಯವಸ್ಥೆ ಹದಗೆಟ್ಟುಹೋಗಿದೆ. ಪ್ರಸ್ತುತ ಇಂತಹ ಪೊಲೀಸ್ ತನಿಖಾ ದಾಳಿಯು ಅಗತ್ಯ ಮತ್ತು ಅನಿವಾರ್ಯ.
ಇತ್ತೀಚೆಗೆ ಜಾತಿ ಮತ್ತು ಹಣದ ಭ್ರಷ್ಟಾಚಾರದ ವಿಷವು ಹೆಡೆ ಎತ್ತಿ ಆಡುತ್ತಿರುವಾಗ ಕೆಲವು ಉಪನ್ಯಾಸಕರು ಬಿ.ಎ, ಬಿಕಾಂ, ಬಿಎಸ್ಸಿ ಮುಂತಾದ ಪದವಿ ಪರೀಕ್ಷೆಯನ್ನು ಪಾಸ್ ಮಾಡಿಸಲು ಇಂತಿಷ್ಟು, ಹೆಚ್ಚು ಅಂಕ ಕೊಡಿಸಲು ಇಂತಿಷ್ಟು ಎಂದು ‘ದಂಧಾ’ ಮಾಡುತ್ತಿರುವರು. ಇವರ ‘ದಂಧಾ’ ಇದೊಂದೇ ಕೆಲಸಕ್ಕೆ ಸೀಮಿತವಲ್ಲ.
ಪರೀಕ್ಷೆ ನಡೆದಾಗ ಕೆಲವರು ತನಿಖಾ ದಳದ ಸದಸ್ಯರಾಗುತ್ತಾರೆ (ಕಾಲೇಜಿನಿಂದ ಹಣ ಎತ್ತಲು). ಯಾವುದಾದರೂ ತಮಗೆ ಅನುಕೂಲ ಮಾಡುವ ಕಾಲೇಜಿಗೆ ಎಕ್ಸಟರ್ನಲ್ ಆಗಿ ಹೋಗುತ್ತಾರೆ. ತಮಗೆ ಬೇಕಾದವರನ್ನು ಪರೀಕ್ಷಾ ಮೌಲ್ಯಮಾಪನಕ್ಕೆ ಕರೆದೊಯ್ಯುತ್ತಾರೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಂದ ಹಣ ಪಡೆದು ಮರುಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಕೊಡಿಸುತ್ತಾರೆ.
ಹಾಗೆಂದು ವಿ.ವಿ.ಯ ಎಲ್ಲ ಉಪನ್ಯಾಸಕರು ಕೆಟ್ಟವರಲ್ಲ ಪಾಂಡವರು ಇದ್ದಾರೆ.
–ಜಗದೀಶ. ವೀ. ನೂಲಿನವರ
ಯಾದಗಿರಿ