ಟಿಪ್ಪು ಪುಣ್ಯತಿಥಿಗೆ ಸರ್ಕಾರಿ ರಜೆ ನೀಡಬೇಕೆಂಬ ಬೇಡಿಕೆ ಬಂದಿದೆ. ದೇಶದಲ್ಲಿ ಸಾಕಷ್ಟು ಪುಣ್ಯಪುರುಷರು, ಆದರ್ಶ ವ್ಯಕ್ತಿಗಳು ಆಗಿಹೋಗಿದ್ದಾರೆ. ಅವರ ಗೌರವಾರ್ಥ ಅಭಿಮಾನಿಗಳು ರಜೆಗಾಗಿ ಆಗ್ರಹಿಸುತ್ತಾರೆ. ಮುಂದಿನ ದಿನಗಳಲ್ಲಿ ಪೂರ್ಣಯ್ಯ, ವಿಶ್ವೇಶ್ವರಯ್ಯ, ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ಇವರೆಲ್ಲರ ಗೌರವಾರ್ಥ ರಜೆ ನೀಡಬೇಕೆಂದು ಆಗ್ರಹಿಸುತ್ತಾರೆ. ಸರ್ಕಾರ ಅನಿವಾರ್ಯವಾಗಿ ಮಣಿಯುತ್ತದೆ ಕೂಡ. ಇರುವ 365 ದಿನಗಳೂ ಸಾಲದಾಗುತ್ತದೆ!
ಯಾವುದೇ ವಿದ್ಯಮಾನ, ಅಭಿಮಾನ ಅತಿಯಾಗಿ ಆವರಿಸಿಕೊಂಡರೆ ಕೊನೆಗೆ ಅದುವೇ ಅವನತಿಗೆ ಆಸ್ಪದ ನೀಡುತ್ತದೆ.
ಸರ್ಕಾರ ರಜೆ ಘೋಷಣೆಗೆ ಮೊದಲು ಈ ಅಂಶಗಳನ್ನು ಪರಾಮರ್ಶಿಸುವುದು ಸೂಕ್ತ.