ನೂತನ ಸರ್ಕಾರ ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿಸುತ್ತದೆ ಎಂದು ವಸತಿ ಸಚಿವ ಅಂಬರೀಷ್ ಹೇಳಿದ್ದು ರಾಜ್ಯದ ಬಹಳಷ್ಟು ಬಡ ಜನತೆ ಆಸೆಯಿಂದ ಸರ್ಕಾರದತ್ತ ಮುಖ ಮಾಡುವಂತಾಗಿದೆ.
ರಾಜ್ಯವನ್ನು ಗುಡಿಸಲುರಹಿತ ರಾಜ್ಯವನ್ನಾಗಿಸುವ ಕನಸು ದಿವಂಗತ ನಟ ಶಂಕರನಾಗ್ ಅವರದ್ದಾಗಿತ್ತು. ಅದಕ್ಕಾಗಿ ಅವರು 1987-88ರಲ್ಲೇ ವಿದೇಶಿ ತಂತ್ರಜ್ಞಾನ ಬಳಸಿ ತಯಾರಿಸಲಾದ ಪ್ರಿಫ್ಯಾಬ್ರಿಕೇಟೆಡ್ ಷೀಟ್ಗಳ ಮೂಲಕ ಶೀಘ್ರವಾಗಿ ಮನೆಕಟ್ಟಬಹುದಾದ ವಿಧಾನ ಯೋಚಿಸಿದ್ದರು.
ಅದಕ್ಕಾಗಿ ಅವರು ವಿದೇಶಕ್ಕೆ ಹೋಗಿ ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಯಲಹಂಕದಲ್ಲಿ ಮಾದರಿ ಮನೆಯನ್ನು ಕಟ್ಟಿ, ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿಸುವ ಕನಸನ್ನು ನನಸಾಗಿಸುವ ಮುನ್ನವೇ ನಮ್ಮನ್ನು ಅಗಲಿದರು.
ಇಂದು ಅವರ ಆತ್ಮೀಯ ಮಿತ್ರ ಅಂಬರೀಷ್ ವಸತಿ ಸಚಿವರಾಗಿದ್ದಾರೆ. ಶಂಕರನಾಗ್ ಕನಸನ್ನು ಅಂಬರೀಷ್ ನನಸು ಮಾಡಲಿ ಎನ್ನುವುದು ನಮ್ಮೆಲ್ಲರ ಆಶಯ.