ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಸಾಲ, ಕೃಷಿ ಭಾಗ್ಯ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆಯಂಥ ಹಲವು ಯೋಜನೆಗಳನ್ನು ಪ್ರಕಟಿಸಿವೆ. ಆದರೆ ಈ ಯೋಜನೆಗಳು ನಿಜವಾದ ಅರ್ಹ ರೈತರಿಗೆ ಸಿಗುತ್ತಿಲ್ಲ. ಉಳ್ಳವರ, ಪ್ರಭಾವಿಗಳ ಪಾಲಾಗುವುದೇ ಹೆಚ್ಚು. ಬಹಳಷ್ಟು ಸಣ್ಣ ಹಿಡುವಳಿದಾರರಿಗೆ ಇಂಥ ಯೋಜನೆಗಳ ಕುರಿತು ಅರಿವು ಸಹ ಇಲ್ಲ.
ಈ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಅವರಿಗೆ ಶೇ 50ರಷ್ಟು ಪ್ರಮಾಣದಲ್ಲಾದರೂ ತಲುಪಿಸಿದರೆ ಸಣ್ಣ ಮತ್ತು ಅತಿಸಣ್ಣ ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತದೆ. ರೈತ ಆತ್ಮಸ್ಥೈರ್ಯ ಕಳೆದುಕೊಳ್ಳುವುದು ತಪ್ಪುತ್ತದೆ.