ನಿವೃತ್ತರಾಗುವವರೆಗೂ ಸೇವೆ ಸಲ್ಲಿಸುವ ಅವಕಾಶ ಹೊಂದಿರುವ ಅಧಿಕಾರಿಗಳಿಗಿಂತಲೂ, ಅಲ್ಪ ಅವಧಿಗೆ ಮಾತ್ರ ಅಧಿಕಾರ ಹೊಂದಿರುವ ಜನಪ್ರತಿನಿಧಿಗಳೇ ಹೆಚ್ಚು ಪ್ರಭಾವಶಾಲಿಗಳೆಂಬುದು ಅನೇಕ ಬಾರಿ ಸಾಬೀತಾಗಿದೆ.
ಹೀಗಾಗಿ ಹುದ್ದೆಯನ್ನು ತ್ಯಜಿಸುವ ನಿರ್ಧಾರದಿಂದ ಅಧಿಕಾರಿಗಳು ದುರ್ಬಲರಾಗುತ್ತಾರೆಯೆ ಹೊರತು ಅದರಿಂದ ಬೇರೆ ಯಾರಿಗೂ ಏನೂ ನಷ್ಟ ಆಗುವುದಿಲ್ಲ.
ಅಧಿಕಾರಿಗಳು ಭಾವಾವೇಶಕ್ಕೆ ಒಳಗಾಗಿ ಸ್ಫೋಟಗೊಂಡಾಗ ‘ನಿಮ್ಮ ಜೊತೆ ನಾವೂ ಹೋರಾಡುತ್ತೇವೆ. ನಿಮ್ಮ ಬೆಂಬಲಕ್ಕೆ ಸದಾ ಸಿದ್ಧ’ ಎಂದು ಹುರಿದುಂಬಿಸುವವರು, ಅಧಿಕಾರಿ ಸೇವೆಯಿಂದ ಅಮಾನತುಗೊಂಡಾಗ ಇಲ್ಲವೇ ರಾಜೀನಾಮೆ ಮೂಲಕ ಹುದ್ದೆ ತ್ಯಜಿಸಿದಾಗ ನಿಧಾನವಾಗಿ ಹಿಂದೆ ಸರಿದು ಮರೆಯಾಗುತ್ತಾರೆ. ಇದು ವಾಸ್ತವ.