ಹಾನಿಕರವಾದ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವುದು ಸಂತೋಷದಾಯಕ. ಮನೆಯ ಮುಂದು ಹಿಂದು ಬರಿಯ ತೆಳು ಪ್ಲಾಸ್ಟಿಕ್ ಕೈಚೀಲಗಳದ್ದೇ ದರ್ಬಾರು. ಗಾಳಿಯಲ್ಲಿ ತೇಲಿ, ಹಾರಾಡಿ ಅಂತಿಮವಾಗಿ ಚರಂಡಿಯನ್ನೇ ಉಗ್ರಾಣವಾಗಿ ಮಾಡಿಕೊಂಡ ಈ ಪಿಡುಗನ್ನು ಇನ್ನಾದರೂ ಹೊಡೆದೋಡಿಸಲು ನಾವೆಲ್ಲರೂ ಒಮ್ಮತದ ನಿರ್ಧಾರ ಮಾಡೋಣ.
ಈ ಪ್ಲಾಸ್ಟಿಕ್ ನಿಷೇಧ ನಿರ್ಧಾರ ಬರೀ ಕಾಗದದ ಆದೇಶವಾಗಿ ಉಳಿಯಲು ಬಿಡಬಾರದು. ಪ್ಲಾಸ್ಟಿಕ್ಗೆ ಪರ್ಯಾಯ ಕಂಡುಕೊಳ್ಳೋಣ. ಬಟ್ಟೆಯ ಕೈಚೀಲಗಳನ್ನೇ ಬಳಸಲು ದೃಢ ಸಂಕಲ್ಪ ಮಾಡೋಣ. ‘ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇದಕ್ಕೆ ಬೇಕಿಲ್ಲ ಯಾರ ಆಜ್ಞೆ. ಮರ ಗಿಡ ಬೆಳೆಸಿ ಪರಿಸರ ಉಳಿಸಿ’.