ಸ್ವಾತಂತ್ರ್ಯಾನಂತರ ನಡೆದ ಯುದ್ಧ ಹಾಗೂ ಇತರ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಯೋಧರ ಪರಿಚಯವುಳ್ಳ ಸಂಪುಟ ಹೊರತರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕು.
ಹುತಾತ್ಮ ಯೋಧರ ವಿಳಾಸ, ಹಿನ್ನೆಲೆಯ ಮಾಹಿತಿ ಮತ್ತು ಸಾಧನೆಯನ್ನು ಒಳಗೊಂಡ ಸಂಪುಟ ರಚಿಸಿದರೆ ಅದು ಮುಂದಿನ ಪೀಳಿಗೆಗೆ ಆಕರ ಗ್ರಂಥವಾಗುತ್ತದೆ.