ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯ ‘ಒಳ್ಳೆಯ ದಿನ’ ತರಲಿದೆ

Last Updated 13 ಜುಲೈ 2014, 19:30 IST
ಅಕ್ಷರ ಗಾತ್ರ

ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಶುಕ್ರ­ವಾರ ಮಂಡಿಸಿದ ಬಜೆಟ್‌ನಲ್ಲಿನ ಒಂದು ಅಂಶದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿರುವಂತೆ ಕಾಣುತ್ತಿಲ್ಲ. ಜೇಟ್ಲಿ ಅವರು ಈ ಬಾರಿಯ ಬಜೆಟ್‌ನಲ್ಲಿ ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ ನೀಡಿರುವುದನ್ನು ನಾವು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿಲ್ಲ.

ಕಿಸಾನ್‌ ವಿಕಾಸ ಪತ್ರಗಳನ್ನು ಪುನಃ ಜಾರಿಗೆ ತರ­ಲಾ­ಗುವುದು ಎಂದಿದ್ದಾರೆ ಜೇಟ್ಲಿ. ಅಲ್ಲದೆ, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (ಪಿಪಿಎಫ್‌) ಹೂಡಿಕೆ ಮಿತಿಯನ್ನು ₨ 1.50 ಲಕ್ಷಕ್ಕೆ ಹೆಚ್ಚಿಸ­ಲಾ­ಗಿದೆ, ₨ 1.50 ಲಕ್ಷದವರೆಗಿನ ಉಳಿತಾಯಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದ್ದಾರೆ. ಸಣ್ಣ ಉಳಿ­ತಾಯಕ್ಕೆ ಕೇಂದ್ರ ಈಗ ನೀಡಿರುವ ಉತ್ತೇಜನ ದೇಶಕ್ಕೆ ಖಂಡಿತ ‘ಒಳ್ಳೆಯ ದಿನ’ ತರಲಿದೆ.

2007–08ರಲ್ಲಿ ಒಟ್ಟು ಆಂತರಿಕ ಉತ್ಪಾದನೆ­ಯಲ್ಲಿ (ಜಿಡಿಪಿ) ಶೇಕಡ 36ರಷ್ಟು ಒಟ್ಟು ಆಂತ­ರಿಕ ಉಳಿತಾಯದ (ಜಿಡಿಎಸ್‌) ಬಾಬ್ತಿಗೆ ಹೋಗು­ತ್ತಿತ್ತು. ಇದು 2012–13ರಲ್ಲಿ ಶೇ 30.1ರಷ್ಟಕ್ಕೆ ಕುಸಿಯಿತು. ‘ಆಂತರಿಕ ಉಳಿತಾಯ ಹೀಗೆ ಕುಸಿಯುತ್ತ ಸಾಗಿದರೆ ಎಲ್ಲ ಬಗೆಯ ಹೂಡಿ­ಕೆ­­ಗಳಿಗೂ ವಿದೇಶಿ ಮೂಲದತ್ತ ಮುಖ ಮಾಡ­ಬೇಕಾ­­­ಗುತ್ತದೆ. ಉಳಿತಾಯದ ಪ್ರಮಾಣ­ವನ್ನು ಹೆಚ್ಚಿಸ­ಲೇಬೇಕು’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಎಚ್ಚರಿಸಿತ್ತು.

ನಮ್ಮ ದೇಶದ ಜನರಲ್ಲಿ, ವಿಶೇಷವಾಗಿ ಗೃಹಿಣಿ­ಯ­ರಲ್ಲಿ, ಉಳಿತಾಯ ಮಾಡುವ ಮನೋಭಾವ ಇದೆ. ಆದರೆ ಕೊಳ್ಳುಬಾಕ ಸಂಸ್ಕೃತಿ, ಮಾಸಿಕ ಕಂತು (ಇಎಂಐ) ಸಂಸ್ಕೃತಿಯ ಮೆರುಗಿನಲ್ಲಿ ಉಳಿ­ತಾಯ ಸಂಸ್ಕೃತಿ ತುಸು ಮಾಸಿದಂತೆ ಕಾಣುತ್ತದೆ. ಕೇಂದ್ರ ಈಗ ನೀಡಿರುವ ಉತ್ತೇಜನ, ದೇಶದ ಆರ್ಥಿಕ­ತೆಗೆ ಒಳ್ಳೆಯ ದಿಕ್ಕು ನೀಡಲಿದೆ. ಜಗತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಿದರೂ, ಸಣ್ಣ ಉಳಿತಾ­ಯ­ಗಳು ನಮ್ಮ ಕೈಹಿಡಿಯುತ್ತವೆ.

ಸಣ್ಣ ಉಳಿತಾ­ಯದ ಮೂಲಕ ‘ಒಳ್ಳೆಯ ದಿನ’ಗ­ಳನ್ನು ನಾವೇ ತಂದುಕೊಳ್ಳಬಹುದು. ಜನ ಉಳಿಸಿದ ಹಣವನ್ನು ಸರ್ಕಾರಗಳು ಮೂಲ­ಸೌಕರ್ಯ ಅಭಿವೃದ್ಧಿಗೆ ಬಳಸಿ­ಕೊಳ್ಳಬಹುದು. ಬಜೆಟ್‌ ಅಂದರೆ, ಇರುವ ಒಂದು ರೂಪಾಯಿ­ಯನ್ನು ಹಂಚುವುದು ಮಾತ್ರ­ವಲ್ಲ. ಅದರಲ್ಲಿ ತುಸು ಮೊತ್ತವನ್ನು ಉಳಿಸು­ವುದೂ ಸೇರಿದೆ. ಅದಕ್ಕೆ ಇಂಬು ಕೊಟ್ಟು ಜೇಟ್ಲಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT