ಗುಲ್ಬರ್ಗದ ಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿಗೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸುವುದು ಸರಿಯಲ್ಲ. ಕೋಮಾ ಸ್ಥಿತಿಯಲ್ಲಿದ್ದ, ಗಂಭೀರ ಗಾಯಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಏರ್ಲಿಫ್್ಟ ಮಾಡಲಾಗುವುದಿಲ್ಲ. ಅವರ ಕುಟುಂಬದವರೇ ಮಾಡದ ಆರೋಪವನ್ನು ರಾಜಕೀಯ ಪಕ್ಷಗಳು ಮಾಡಬಾರದು.
ಮುಖ್ಯವಾದ ಸಂಗತಿ ಎಂದರೆ ಪೊಲೀಸರಿಗೆ ಸಾಕಷ್ಟು ಬುಲೆಟ್ ಪ್ರೂಫ್ ಜಾಕೆಟ್ಗಳು ಯಾಕಿಲ್ಲ ಎಂಬುದು. ಒಳ್ಳೆಯ ಅಧಿಕಾರಿಗಳು ರಾಜ್ಯದ ಆಸ್ತಿ. ಹಾಗಾಗಿ, ಅವರ ಕೆಲಸಕ್ಕೆ ಅಗತ್ಯ ಸಲಕರಣೆಗಳನ್ನು ಸರ್ಕಾರ ಆದ್ಯತೆಯಿಂದ ಒದಗಿಸಬೇಕು.