ಬ್ಯಾಟರಾಯನಪುರ, ಹೊಸಗುಡ್ಡದಹಳ್ಳಿ, ಮೈಸೂರು ರಸ್ತೆ ಟೋಲ್ಗೇಟ್ನವರೆಗೆ ದಿನಕ್ಕೆ ಸಾವಿರಾರು ವಾಹನಗಳು ದಟ್ಟವಾಗಿ ಸಂಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಬ್ಯಾಟರಾಯನಪುರ – ಬಾಪೂಜಿನಗರ, ಕಸ್ತೂರಿಬಾ ನಗರಕ್ಕೆ ಹೊಂದಿಕೊಂಡಂತೆ ಇರುವ ಟೋಲ್ಗೇಟ್ನ ಬಸ್ಸ್ಟಾಪ್ ಸಮೀಪದಲ್ಲಿ ಸಿಗ್ನಲ್ ಲೈಟ್ ಹಾಕಿಸಬೇಕಾದ ಅವಶ್ಯಕತೆ ಇದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ರಸ್ತೆ ದಾಟಬೇಕಾದರೆ ಪ್ರಾಣವನ್ನು ಕೈಯಲ್ಲಿ ಹಿಡಿದಿರಬೇಕಾಗಿದೆ. ಕ್ರೈಸ್ತಬಾಂಧವರ ರುದ್ರಭೂಮಿಗೆ ಹೊಂದಿಕೊಂಡಂತೆ ಸಿಗ್ನಲ್ ದೀಪ ಅಳವಡಿಸಿದರೆ ಉಪಕಾರವಾಗುತ್ತದೆ.