ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಜಿಗದ ಸಂಗತಿ

Last Updated 29 ಜನವರಿ 2016, 19:51 IST
ಅಕ್ಷರ ಗಾತ್ರ

ಪ್ರೊ.ಗಣೇಶ ನಾಯಿಕ ಅವರ ‘ಸೇವಾ ಭದ್ರತೆ ಒದಗಿಸಿ’ (ವಾ.ವಾ., ಜ. 20) ಎಂಬ ಮನವಿ ಅರ್ಥವಾಗದ ಹಾಗೂ ಸೋಜಿಗದ ವಿಷಯವಾಗಿದೆ. ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೇವಲ 2,160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬಲು ಮುಂದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಿದ್ಧತೆ ಕುಂಟುತ್ತಾ ಸಾಗಿದೆ.  ಇದರ ಜೊತೆಗೆ ಪ್ರಾಧಿಕಾರವು  ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಮುಂದೆ ನೇಮಕಾತಿ ಪ್ರಕ್ರಿಯೆಯು ನ್ಯಾಯಾಲಯ, ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂಬ ಹೇಳಿಕೆ ನೀಡಿದೆ.

ಪರಿಸ್ಥಿತಿ ಹೀಗಿರುವಾಗ ಗಣೇಶ ಅವರು ಹೊಸ ನೇಮಕಾತಿಯಿಂದ 14,500 ಅತಿಥಿ ಉಪನ್ಯಾಸಕರು ವೃತ್ತಿಯಿಂದ ಹೊರಬೀಳುವ ಸಾಧ್ಯತೆಯಿದೆ ಎಂಬ ನಿಲುವನ್ನು ವ್ಯಕ್ತಪಡಿಸಿರುವುದು ಆಶ್ಚರ್ಯಕರ. ಬರೀ 2,160 ಹುದ್ದೆಗಳ ನೇಮಕಾತಿಯಿಂದ 14,500 ಅತಿಥಿ ಉಪನ್ಯಾಸಕರು ಹೇಗೆ ಕೆಲಸದಿಂದ ವಂಚಿತರಾಗುತ್ತಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT