ಮಕ್ಕಳ ಕಳ್ಳಸಾಗಣೆ ಮತ್ತು ಅವರನ್ನು ಅಪಹರಿಸಿ ದುಷ್ಕೃತ್ಯಕ್ಕೆ ಇಳಿಸುವ ದಂಧೆ ಅವ್ಯಾಹತವಾಗಿ ನಡೆದಿದೆ. ಇದೊಂದು ಅಮಾನವೀಯ ಹಾಗೂ ಅಮಾನುಷ ಕೃತ್ಯ. ಇಂಥ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಮನೆಗೆಲಸಕ್ಕೆ ಮತ್ತು ಬೇಡುವ ವೃತ್ತಿಗೂ ತಳ್ಳಲಾಗುತ್ತದೆ. ಕೆಲವೊಮ್ಮೆ ಅಂಗವಿಕಲರನ್ನಾಗಿ ಮಾಡಲಾಗುತ್ತದೆ.
ಇಂತಹ ಪಿಡುಗನ್ನು ನಿವಾರಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಬೇಡುವ ಮಕ್ಕಳ ಡಿ.ಎನ್.ಎ. ಪರೀಕ್ಷೆ ಮಾಡಿಸಿ, ಆ ಮೂಲಕ ಮಕ್ಕಳ ಅಸಲಿ ಪೋಷಕರ ಪತ್ತೆಗೆ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ₹4 ಕೋಟಿ ಖರ್ಚು ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದ ಈ ಉಪಯುಕ್ತ ಯೋಜನೆಯನ್ನು ಇತರ ರಾಜ್ಯಗಳೂ ಅನುಸರಿಸಿ ಮಕ್ಕಳ ಅಪಹರಣದಂತಹ ಕ್ರೂರ ಕೃತ್ಯವನ್ನು ತಡೆಯಬೇಕಾಗಿದೆ.