ಈ ಆಕ್ಷೇಪಗಳಿಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ‘ರಾಹುಲ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಕರ್ನಾಟಕದಲ್ಲಿ ಜೂನಿಯರ್ ಹಂತಗಳ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಶ್ರೇಷ್ಠ ಕ್ರಿಕೆಟಿಗನ ಮಗ ಎಂಬ ಮಾತ್ರಕ್ಕೆ ಯಾರೂ ಕೂಡ ವೃತ್ತಿಪರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ. ಸ್ವಜನಪಕ್ಷಪಾತವನ್ನು ಎಳೆದುತರುವ ಬದಲು ಆ ಮಗುವಿಗೆ ಶುಭ ಹಾರೈಸಿ’ ಎಂದು ಸಲಹೆ ನೀಡಿದ್ದಾರೆ.