ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Polls Karnataka LIVE | ಮತದಾನ ಅಂತ್ಯ– ಬಹುತೇಕ ಶಾಂತಿಯುತ

ರಾಜ್ಯದಲ್ಲಿ 5 ಗಂಟೆವರೆಗೆ ಶೇ 66.05 ರಷ್ಟು ಮತದಾನವಾಗಿದೆ: ಚುನಾವಣಾ ಆಯೋಗ
Published 7 ಮೇ 2024, 1:51 IST
Last Updated 8 ಮೇ 2024, 10:12 IST
ಅಕ್ಷರ ಗಾತ್ರ
01:5907 May 2024

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭ

ದೇಶ– ನಾಡಿನ ಭವಿಷ್ಯ ರೂಪಿಸುವ ಲೋಕಸಭೆಯ ಎರಡನೇ ಹಂತದ ಮತದಾನಕ್ಕೆ ಅರ್ಧ ರಾಜ್ಯ ಸಜ್ಜಾಗಿದೆ. ರಾಜ್ಯದ 14 ಕ್ಷೇತ್ರ ಒಳಗೊಂಡಂತೆ 93 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಮತದಾರರ ಬರುವಿಕೆಗೆ ಮತಗಟ್ಟೆಗಳು ಅಣಿಗೊಂಡಿದ್ದು, ಬಿರುಬಿಸಿಲು ನಡುವೆಯೂ ಮತದಾರರು ತಮ್ಮ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆಂಬ ನಿರೀಕ್ಷೆ ಬಲಗೊಂಡಿದೆ. ಕರಾವಳಿ, ಮಲೆನಾಡು, ಮಧ್ಯ, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಿಜೆಪಿ– ಕಾಂಗ್ರೆಸ್ ಮಧ್ಯೆಯೇ ನೇರ ಹಣಾಹಣಿ ಇದೆ. ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಪೈಪೋಟಿ ನೀಡುತ್ತಿದ್ದು, ತ್ರಿಕೋನ ಸ್ಪರ್ಧೆಯ ವಾತಾವರಣ ಇದೆ.

01:5007 May 2024

ಬಿಸಿಲ ನಡುವೆ ಮತದಾನ: ಮುಂಜಾಗ್ರಾತಾ ಕ್ರಮ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯಲಿದ್ದು, ಹಲವು ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ನೆತ್ತಿ ಸುಡುವ, ಧಗೆಯೇರಿಸಿದ ಬಿಸಿಲ ನಡುವೆಯೇ ಮತಭಿಕ್ಷುಗಳು, ತಮ್ಮ ಶಕ್ತಿಯನ್ನೆಲ್ಲ ಧಾರೆಯೆರೆದು ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ಭಾರಿ ಗಮನ ಸೆಳೆವ ಕ್ಷೇತ್ರಗಳು, ಯಾವೆಲ್ಲ ನಾಯಕರಿಗೆ ಈ ಹಂತದ ಚುನಾವಣೆ ನಿರ್ಣಾಯಕ ಎಂಬ ಚಿತ್ರಣ ಇಲ್ಲಿದೆ.

01:5907 May 2024

ವಿಜಯನಗರ ಜಿಲ್ಲೆಯಲ್ಲಿ ಮತದಾನ ಆರಂಭ

ಹೊಸಪೇಟೆ (ವಿಜಯನಗರ): ಬಳ್ಳಾರಿ ಲೋಕಸಭಾ ಕ್ಷೇತ್ರದ ಭಾಗವಾಗಿರುವ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬಿಸಿಲೇರುವ ಮೊದಲೇ ತಮ್ಮ ಹಕ್ಕನ್ನು ಚಲಾಯಿಸಲು ಮತದಾರರು ಮತಗಟ್ಟೆಯತ್ತ ಧಾವಿಸತೊಡಗಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ  ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಗೇ ಸರದಿ ಸಾಲು ಕಾಣಿಸಿತು.

02:0007 May 2024

ಲೋಕಸಭೆ ಚುನಾವಣೆ: ವಿಜಯಪುರದಲ್ಲಿ ಮತದಾನ ಬಿರುಸು

ವಿಜಯಪುರ: ವಿಜಯಪುರ ಎಸ್‌.ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯಾದ್ಯಂತ ಬೆಳಿಗ್ಗೆ 7ರಿಂದಲೇ ಮತದಾನ ಬಿರುಸಿನಿಂದ ಆರಂಭವಾಗಿದೆ. 

ವಿಜಯಪುರ ನಗರದಲ್ಲಿ ಬೆಳಿಗ್ಗೆ 7 ಕ್ಕೆ ಮತದಾನ ಆರಂಭವಾಗುತ್ತಿರುವಂತೆ ಜನರು ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿರುವುದು ಕಂಡುಬಂದಿತು.

02:0807 May 2024

ಬೆಳಗಾವಿಯಲ್ಲಿ ಬಿರುಸಿನ ಮತದಾನ

ಬೆಳಗಾವಿ ನಗರದಲ್ಲಿ ಬೆಳಿಗ್ಗೆ 7ರಿಂದಲೇ ಮತದಾನ ಚುರುಕುಗೊಂಡಿದೆ. ಬಿಸಿಲಿನ ಕಾರಣಕ್ಕೆ ಜನರು ಬೇಗ ಬಂದು ಮತ ಚಲಾಯಿಸುತ್ತಿರುವ ಕಾರಣ, ಹಲವು ಮತಗಟ್ಟೆಗಳಲ್ಲಿ ಜನರ ಉದ್ದನೆಯ ಸರದಿ ಸಾಲು ಕಂಡುಬರುತ್ತಿದೆ.

ಬೆಳಗಾವಿಯ ಹೊಸೂರಿನ ಬಸವನ ಗಲ್ಲಿಯ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ ಚಲಾಯಿಸಿದರು

ಬೆಳಗಾವಿಯ ಹೊಸೂರಿನ ಬಸವನ ಗಲ್ಲಿಯ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ ಚಲಾಯಿಸಿದರು

02:1107 May 2024

ಬಳ್ಳಾರಿ| ಮತದಾನಕ್ಕೆ ಪೂರಕ 'ವಾತಾವರಣ'!

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಮತ ಚಲಾಯಿಸಲು ಜನ ಮತಗಟ್ಟೆ ಕೇಂದ್ರಗಳಿಗೆ ತೆರಳುತ್ತಿರುವ, ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು.

ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ

ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ

02:1807 May 2024
02:3007 May 2024

ಬಾಗಲಕೋಟೆ: ಮತದಾನ ಚುರುಕು

ಬಾಗಲಕೋಟೆ: ಲೋಕಸಭಾ ಕ್ಷೇತ್ರದ ಹಲವು ಮತಗಟ್ಟೆಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ.

ಬಿಸಿಲು ಹೆಚ್ಚಾಗುವ ಮುನ್ನ ಮತ ಹಾಕಲು ಉತ್ಸುಕರಾಗಿದ್ದಾರೆ. ಯುವ ಜನಾಂಗವೂ ಸಾಕಷ್ಟು ಸಂಖ್ಯೆಯಲ್ಲಿ ಮತ ಚಲಾಯಿಸಲು ಮುಂದಾಗಿದ್ದಾರೆ.

ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 18,06,183 ಮಂದಿ ಮತ ಚಲಾಯಿಸಲಿದ್ದಾರೆ.

ಶಾಸಕ ಸಿದ್ದು ಸವದಿ ಕುಟುಂಬ ಮತ್ತು ಕಾರ್ಯಕರ್ತರ ಜೊತೆಗೂಡಿ ಮತದಾನ ಮಾಡಿದರು

ಶಾಸಕ ಸಿದ್ದು ಸವದಿ ಕುಟುಂಬ ಮತ್ತು ಕಾರ್ಯಕರ್ತರ ಜೊತೆಗೂಡಿ ಮತದಾನ ಮಾಡಿದರು

02:3507 May 2024

ಕೊಪ್ಪಳ ಜಿಲ್ಲೆಯಾದ್ಯಂತ ಮತದಾನ ಆರಂಭ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಣದಲ್ಲಿರುವ 19 ಜನ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತದಾನ ಜಿಲ್ಲೆಯಾದ್ಯಂತ ಮಂಗಳವಾರ ಆರಂಭಗೊಂಡಿದೆ.

ಒಟ್ಟು 18,66,397 ಮತದಾರರು ಇದ್ದು, ಜಿಲ್ಲೆಯಲ್ಲಿ 1317 ಮತಗಟ್ಟೆಗಳಿವೆ. ಸಾಕಷ್ಟು ಬಿಸಿಲು ಇರುವ ಕಾರಣ 570 ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಕೊಪ್ಪಳ ‌ಜಿಲ್ಲೆ ಅಳವಂಡಿ ಸಮೀಪದ ಕಾತರಕಿ ಗ್ರಾಮದಲ್ಲಿ ಅಂಗವಿಕಲ ಗವಿಸಿದ್ದಪ್ಪ ಮತ‌ಚಲಾಯಿಸಿದರು

ಕೊಪ್ಪಳ ‌ಜಿಲ್ಲೆ ಅಳವಂಡಿ ಸಮೀಪದ ಕಾತರಕಿ ಗ್ರಾಮದಲ್ಲಿ ಅಂಗವಿಕಲ ಗವಿಸಿದ್ದಪ್ಪ ಮತ‌ಚಲಾಯಿಸಿದರು

02:3507 May 2024

ಬೀದರ್ ಲೋಕಸಭಾ ಕ್ಷೇತ್ರ; ಚುರುಕಿನ ಮತದಾನ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಚುರುಕಿನ ಮತದಾನ ಆರಂಭವಾಗಿದೆ.

ಬೆಳಿಗ್ಗೆ ಏಳು ಗಂಟೆಯಿಂದಲೇ ಜನ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ. ಕುಟುಂಬ ಸದಸ್ಯರೊಡನೆ ಮತದಾನಕ್ಕೆ ಮತಗಟ್ಟೆಗಳಿಗೆ ಬಂದಿರುವುದರಿಂದ ಎಲ್ಲ ಕಡೆಗಳಲ್ಲಿ ಉದ್ದನೆಯ ಸಾಲು ಕಂಡು ಬಂತು.

ಬೀದರಿನ ಮೈಲೂರು ಶಾಲೆಯ ಮತಗಟ್ಟೆ ಸಂಖ್ಯೆ 196ರಲ್ಲಿ 95 ವರ್ಷದ ವೆಂಕಟರಾವ್ ಎಂಬುವರು ವೀಲ್ ಚೇರ್ ನಲ್ಲಿ ಬಂದು ಮತ ಹಾಕಿದರು.

ಬೀದರಿನ ಮೈಲೂರು ಶಾಲೆಯ ಮತಗಟ್ಟೆ ಸಂಖ್ಯೆ 196ರಲ್ಲಿ 95 ವರ್ಷದ ವೆಂಕಟರಾವ್ ಎಂಬುವರು ವೀಲ್ ಚೇರ್ ನಲ್ಲಿ ಬಂದು ಮತ ಹಾಕಿದರು.