ಫೇಸ್ಬುಕ್ನಲ್ಲಿ ಈ ಕುರಿತು ಬುಧವಾರ ವಿವರಣೆ ನೀಡಿರುವ ಕೀರ್ತಿಕುಮಾರ್ ಅವರು, ‘2019ರಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಧೋರಣೆಗಳ ವಿರುದ್ಧ ನಿಲುವು ಹೊಂದಿದ್ದ ರಾಜ್ ಠಾಕ್ರೆ ಅವರು, ಇಂದಿನ ನಿರ್ಣಾಯಕ ಪರಿಸ್ಥಿತಿಯಲ್ಲಿ ಅವರು ತಮ್ಮ ರಾಜಕೀಯ ಪಾತ್ರದ ನಿಲುವು ಬದಲಾಯಿಸಿದ್ದಾರೆ. ರಾಜ್ ಅವರು ಎಷ್ಟು ಸರಿ ಅಥವಾ ಎಷ್ಟು ತಪ್ಪು ಎಂಬುದರ ಬಗ್ಗೆ ರಾಜಕೀಯ ವಿಶ್ಲೇಷಕರು ತಿಳಿಸುತ್ತಾರೆ’ ಎಂದಿದ್ದಾರೆ.