ಅಸ್ಸಾಂನಲ್ಲಿ ಮಾಫಿಯಾ ರಾಜ್ ಇದೆ ಎಂಬ ಪ್ರಿಯಾಂಕಾ ಗಾಂಧಿ ಅವರ ಆರೋಪವನ್ನು ತಳ್ಳಿಹಾಕಿರುವ ಅವರು, ‘ರಾಜ್ಯದಾದ್ಯಂತ ಶಾಂತಿ ನೆಲೆಸಿದೆ ಮತ್ತು ಎಲ್ಲಾ ಕಲ್ಯಾಣ ಯೋಜನೆಗಳು ಜನರನ್ನು ತಲುಪುತ್ತಿವೆ’ ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಮಾಡಿದ್ದ ವಾಷಿಂಗ್ ಮೆಷನ್ ಆರೋಪಕ್ಕೆ ತಿರುಗೇಟು ನೀಡಿದ ಶರ್ಮಾ, ‘ಕಾಂಗ್ರೆಸ್ ಬಳಿ ದೊಡ್ಡ ಹಾಗೂ ಹೆಚ್ಚಿನ ವೋಲ್ಟೇಜ್ ಹೊಂದಿದ ವಾಷಿಂಗ್ ಮೆಷನ್ ಇದೆ. ಅದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಭ್ರಷ್ಟಚಾರವನ್ನು ತೊಳೆದು ಹಾಕಲು ಬಳಸುತ್ತಾರೆ’ ಎಂದು ಆರೋಪಿಸಿದರು.
ಸಿಎಂ ಕೇಜ್ರಿವಾಲ್ ಅವರು ಅಬಕಾರಿ ಹಗರಣದ ಮೂಲಕ ಹಣವನ್ನು ಲೂಟಿ ಮಾಡಿದ್ದಾರೆ ಎಂದು ನಾಲ್ಕು ತಿಂಗಳ ಹಿಂದೆ ಅಷ್ಟೇ ಪ್ರಿಯಾಂಕಾ ಅವರು ಹೇಳಿದ್ದರು. ಆದರೆ, ಈಗ ಕೇಜ್ರಿವಾಲ್ ಉತ್ತಮ ವ್ಯಕ್ತಿ ಎಂದು ಹೇಳುತ್ತಿದ್ದಾರೆ. ಯಾವ ವಾಷಿಂಗ್ ಮೆಷನ್ನಲ್ಲಿ ಕೇಜ್ರಿವಾಲ್ ಅವರು ಮಾಡಿದ ಭ್ರಷ್ಟಚಾರವನ್ನು ಸ್ವಚ್ಛಗೊಳಿಸಿದರು ಎಂದು ಅವರು ಪ್ರಶ್ನಿಸಿದ್ದಾರೆ.