‘ದೂರುದಾರ ತಮ್ಮ ಕುಟುಂಬದ ಜೊತೆ ಕಾರಿನಲ್ಲಿ ಶೋಲೆ ವೃತ್ತಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ಹಣ ಕೇಳಿದ್ದರು. ದೂರುದಾರ ಹಣ ಕೊಟ್ಟಿರಲಿಲ್ಲ. ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದನ್ನು ನಿರ್ಲಕ್ಷಿಸಿದ್ದ ದೂರುದಾರ, ಸ್ಥಳದಿಂದ ಹೊರಟಿದ್ದರು. ಆಟೊದಲ್ಲಿ ಹಿಂಬಾಲಿಸಿದ್ದ ಆರೋಪಿ, ಮಾರ್ಗಮಧ್ಯೆ ಅಡ್ಡಗಟ್ಟಿ ಪುನಃ ಜಗಳ ತೆಗೆದು ಬೆದರಿಸಿದ್ದರು. ನಂತರ, ಆರೋಪಿ ಸ್ಥಳದಿಂದ ಹೊರಟು ಹೋಗಿದ್ದಾರೆ’ ಎಂದು ತಿಳಿಸಿದರು.