ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಗಳಲ್ಲಿ ಪ್ರಕೃತಿಯ ಅನಾವರಣ

Last Updated 18 ಜುಲೈ 2018, 19:30 IST
ಅಕ್ಷರ ಗಾತ್ರ

ಆಗಸದಿಂದ ಭೂಮಿಗೆ ಸ್ಪರ್ಶಿಸುವ ಕಿರಣಗಳು, ಚಂದ್ರನ ಬೆಳದಿಂಗಳ ಪ್ರಭೆ, ನಿಸರ್ಗದ ರಮಣೀಯ ತಾಣಗಳು, ಬೆಟ್ಟಗುಡ್ಡಗಳು, ಶಿಖರವನ್ನು ಆವರಿಸಿರುವ ಮಂಜು, ದೇವಾಲಯಗಳು, ಸ್ಮಾರಕಗಳು, ಹಂಪೆಯ ವಿಹಂಗಮ ನೋಟ ಹೀಗೆ ಒಂದೆ ಎರಡೇ... ಎಲ್ಲರನ್ನು ಒಂದು ಕ್ಷಣ ಚಕಿತಗೊಳಿಸುವ ವಿನೂತನ ಚಿತ್ರಗಳ ಸರಣಿಯನ್ನು ರಚಿಸಿದವರು ಕಲಾವಿದೆ ಬಿ.ಎನ್.ವಿದ್ಯಾ.

ಬೆಂಗಳೂರಿನ ವಾಜರಹಳ್ಳಿಯ ನಿವಾಸಿಯಾದ ಅವರು ಎಂ.ಎ (ಅಗ್ರೊ ಎಕಾನಾಮಿಕ್ಸ್) ಪದವೀಧರರು. ಜೊತೆಗೆ ಹವ್ಯಾಸಿ ಚಿತ್ರಕಾರರು. ಅವರು ಕುಂಚದಲ್ಲಿ ಅರಳಿಸಿದ ಚಿತ್ರಗಳು ಸಾಮಾನ್ಯವಾದುದಲ್ಲ. ನೋಡುಗರು ಒಂದು ಕ್ಷಣ ಭಾವಪರವಶರಾಗುವುದಂತೂ ಸತ್ಯ. ಅತ್ಯದ್ಭುತವಾದ ವಿಚಾರಗಳು ಕಲಾತ್ಮಕ ವಿಷಯಗಳಾಗಿ ಹೊರಹೊಮ್ಮಿದಾಗ ಎಲ್ಲರೂ ಮೆಚ್ಚುವ ಮತ್ತು ಆಕರ್ಷಿಸುವ ಕಲಾಸರಣಿ ಸಿದ್ಧವಾಗಿ ಬಿಡುತ್ತದೆ. ಅಂತಹ ಕಲಾವಿಹಾರದಲ್ಲಿ ಸಂಚಾರಿಯಾಗಿ ವಿನೂತನ ಕಲಾಕೃತಿಗಳ ಗುಚ್ಚವನ್ನು ನೀಡಿದ್ದಾರೆ ಅವರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೇ 20ರಿಂದ 27ರವರೆಗೆ ನಡೆಯುವ ಅವರ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಅವರು ರಚಿಸಿದ ವಿಭಿನ್ನ 25ಕ್ಕಿಂತಲೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವರು ಜಲವರ್ಣ, ತೈಲವರ್ಣ, ಆಕ್ರಿಲಿಕ್‌ ಮಾದ್ಯಮದಲ್ಲಿ ರಚಿಸಿರುವ ಕಲಾಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದಂತೂ ಸತ್ಯ. ಇಂತಹ ಕಲಾಕೃತಿಗಳನ್ನು ರಚಿಸಲು ಕಾರಣ ಅವರು ಬಾಲ್ಯದಲ್ಲಿ ನಿಸರ್ಗದ ಮಡಿಲಲ್ಲಿ ಬೆಳೆದವರು.

ಮಧ್ಯಪ್ರದೇಶದ ನಿಸರ್ಗವು ಬಾಲ್ಯದಲ್ಲಿ ಅವರ ಮೇಲೆ ಅಪಾರ ಪರಿಣಾಮ ಬೀರಿದ್ದು ನಂತರದ ದಿನಗಳಲ್ಲಿ ತಾವು ರಚಿಸಿದ ಅತೀ ಹೆಚ್ಚಿನ ಕಲಾಕೃತಿಗಳಲ್ಲಿ ಅಲ್ಲಿಯ ವಿಭಿನ್ನ ತಾಣಗಳನ್ನು ರಚಿಸಿರುವುದು ವಿಶೇಷ. ಒಬ್ಬ ಕಲಾವಿದನಿಗೆ ಪ್ರಕೃತಿ ಹೇಗೆಲ್ಲ ಉತ್ತೇಜಿಸುತ್ತದೆ ಎನ್ನುವುದಕ್ಕೆ ವಿದ್ಯಾರವರ ಕಲಾಕೃತಿಗಳೇ ಸಾಕ್ಷಿ.

ಚಿತ್ರಕಲಾ ಪರಿಷತ್ತಿನಲ್ಲಿ ಆರು ತಿಂಗಳ ಕಲಾ ಹವ್ಯಾಸಿ ತರಗತಿಗೆ ಸೇರಿ ತರಬೇತಿ ಪಡೆದು ಕಲೆಯಲ್ಲಿ ಹೆಚ್ಚಿನ ನೈಪುಣ್ಯತೆಯನ್ನು ಅವರು ಪಡೆದಿದ್ದಾರೆ. ಅವರು ಹೇಳುವ ಪ್ರಕಾರ, ‘ಕಲೆ ಎಂಬುದು ತಪಸ್ಸು. ಅದನ್ನು ಕರಗತ ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ. ನಾನು ಕೂಡ ಕಲಾತಪಸ್ವಿಯಾಗಿ ಅದರಲ್ಲಿ ತಲ್ಲೀನಳಾಗಿ ಹಲವಾರು ಕಲಾಕೃತಿಗಳನ್ನು ಪ್ರಕೃತಿಯ ರಮ್ಯತಾಣಗಳ ಜೊತೆಗೆ ಚಿತ್ರಿಸಿದ್ದೇನೆ. ನನಗೆ ಈ ರೀತಿಯ ಉತ್ತೇಜನ ನೀಡಿದ ಪ್ರಕೃತಿಗೆ ವಂದಿಸುತ್ತೇನೆ’ ಎನ್ನುತ್ತಾರೆ.

ಬಿ.ಎನ್.ವಿದ್ಯಾ
ಬಿ.ಎನ್.ವಿದ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT