ದೇವನಹಳ್ಳಿ: ಪಟ್ಟಣದ ಪುರಸಭೆ ಆವರಣದಲ್ಲಿ ಅಂಗನವಾಡಿ ಕೇಂದ್ರ ಮತ್ತು ವಿದ್ಯಾರ್ಥಿ ನಿಲಯಕ್ಕೆ ರೂ8.78 ಲಕ್ಷ ವೆಚ್ಚದ ದಿನ ಬಳಕೆ ಪರಿಕರವನ್ನು ಪುರಸಭೆ ಅಧ್ಯಕ್ಷ ಶಾರದಮ್ಮ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ.ಎಚ್ ನಾಗರಾಜ್, ‘2013–14 ಸಾಲಿನ ಎಸ್.ಎಫ್.ಸಿ ಯೋಜನೆಯಡಿ ಶೇಕಡ 22.75ರ ಅನುದಾನದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ಟಿಲ್ ತಟ್ಟೆ, ನೀರಿನ ಲೋಟ, ಅಡುಗೆ ಪಾತ್ರೆ ಹಾಗೂ ಇತರೆ ಪರಿಕರಕ್ಕೆ ರೂ4.91 ಲಕ್ಷ ಮತ್ತು ಬಿಸಿಎಂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಎರಡು ಕಬ್ಬಿಣದ ಮಂಚ, 32 ಹಾಸಿಗೆ, 32 ತಲೆ ದಿಂಬು, 32 ಹೊದಿಕೆ ಮತ್ತು ಕವರ್ಗಳನ್ನು ರೂ3.87 ಲಕ್ಷ ವೆಚ್ಚದಲ್ಲಿ ಖರೀದಿಸಿ ವಿತರಿಸಲಾಗುತ್ತಿದೆ. ಇದನ್ನು ಸೂಕ್ತ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.