ನವದೆಹಲಿ (ಐಎಎನ್ಎಸ್): ಅಂಡ-ಮಾನ್ ಸಮುದ್ರ ಮತ್ತು ಬಂಗಾಳಕೊಲ್ಲಿಯ ಕೆಲವು ಭಾಗಗಳನ್ನು ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಬಂಗಾಳಕೊಲ್ಲಿಯ ಆಗ್ನೇಯ ಭಾಗದ ಕೆಲವು ಪ್ರದೇಶಗಳಿಗೆ ನಿರೀಕ್ಷೆಗಿಂತ ಎರಡು ದಿನ ಮೊದಲೇ ಅಂದರೆ ಭಾನುವಾರ ಮುಂಗಾರು ಮಳೆ ಕಾಲಿಟ್ಟಿದೆ. ಮುಂದಿನ ಎರಡು ದಿನಗಳಲ್ಲಿ ಅದು ದಕ್ಷಿಣ ಮತ್ತು ಕೇಂದ್ರ ಬಂಗಾಳ ಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಈ ವರ್ಷ ನಾಲ್ಕು ದಿನ ತಡವಾಗಿ ಅಂದರೆ, ಜೂನ್ ಐದರಂದು ಮಳೆಯು ಕೇರಳಕ್ಕೆ ಕಾಲಿಡುವ ನಿರೀಕ್ಷೆ ಇದೆ.