<p>‘ಇವರು ನನ್ನೆದುರು ಹಾದು ಹೋದಾಗಲೆಲ್ಲ / ಹಳ್ಳಿಗಾಡಿನ ಕಡೆಯ ಸುಪ್ರನ್ನತೆಯೊಂದು ನಗರಕ್ಕೆ ಸಂದಂತೆ / ಬೆಳಗಾಗ ಚಳಿಯಲ್ಲಿ ಬಿಸಿನೀರಿನಲಿ ಮಿಂದಂತೆ / ಎದೆ ಸ್ವಚ್ಛಗೊಳ್ಳುತ್ತದೆ, ಹಗುರಕ್ಕೆ ಸಲ್ಲುತ್ತದೆ’– ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಪ್ರೊ. ಕೆ.ಎಸ್. ನಿಸಾರ್ ಅಹಮದ್ ಚಿತ್ರಿಸಿರುವ ರೀತಿ ಇದು. ಹೌದು, ಮಾಸ್ತಿ ಪ್ರಸನ್ನತೆಗೆ – ಮನುಷ್ಯಪ್ರೀತಿಗೆ ಇನ್ನೊಂದು ಹೆಸರು.<br /> <br /> ಬದುಕು ಹಾಗೂ ಬರಹ ಎರಡರಲ್ಲೂ ಮಾನವೀಯತೆಯನ್ನು ಕಾಣಿಸಿದ ‘ಅಪ್ಪಟ ಮನುಷ್ಯ’ ಅವರು. ಸಹಲೇಖಕರ ಸಂಕಷ್ಟಗಳಿಗೆ ಒದಗಿದ್ದು, ಕಿರಿಯ ಲೇಖಕರನ್ನು ಮಮತೆಯಿಂದ ಕಂಡಿದ್ದು– ಮಾಸ್ತಿ ಅವರ ಅಂತಃಕರಣಕ್ಕೆ ಅವರೇ ಸಾಟಿ.<br /> <br /> ಜೀವನಪ್ರೀತಿಯ ಕಾರಣದಿಂದಲೂ ಅವರು ಮುಖ್ಯರು. ಕೋಟು ತೊಟ್ಟು, ಕೊಡೆ ಹಿಡಿದು, ಪ್ರತಿ ಸಂಜೆ ಬೆಂಗಳೂರಿನ ಗಾಂಧಿಬಜಾರ್ನ ಕ್ಲಬ್ಗೆ ಹೋಗುತ್ತಿದ್ದ ಜೀವನಪ್ರೀತಿ ಅವರದು.<br /> <br /> ಈ ಜೀವನೋತ್ಸಾಹವನ್ನೇ– ‘ಕ್ಲಬ್ಬಿನಲಿ ನಿಶ್ಚಿಂತೆಯಾಗಿ ಎಲೆ ಕಲಸುವುದು / ಇಪ್ಪತ್ತೆಂಟನಾಡುವುದು – ನಡುವೆ ಅದೂ ಇದೂ / ಇಪ್ಪತ್ತೆಂಟನಾಡುವುದು’ ಎಂದು ನಿಸಾರರು ಚಿತ್ರಿಸಿದ್ದಾರೆ.<br /> <br /> ಅಂದಹಾಗೆ, ನಾಳೆ ಮಾಸ್ತಿ ಅವರ ಹುಟ್ಟುಹಬ್ಬ (1891–1968). ಜೂನ್ 6 ಅವರು ಹುಟ್ಟಿದ ದಿನವೂ ನಿಧನರಾದ ದಿನವೂ ಹೌದು. ಪ್ರಸ್ತುತ ಕನ್ನಡ ಸಾರಸ್ವತಲೋಕ ‘ಮಾಸ್ತಿಯವರ 125ನೇ ಜಯಂತಿ’ ಆಚರಿಸುತ್ತಿರುವ ಸಂದರ್ಭದಲ್ಲಿ ಇಲ್ಲಿನ ಚಿತ್ರಗಳು ಮಾಸ್ತಿಯವರ ವ್ಯಕ್ತಿತ್ವದ ಚೆಲುವನ್ನು ಸೂಚಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇವರು ನನ್ನೆದುರು ಹಾದು ಹೋದಾಗಲೆಲ್ಲ / ಹಳ್ಳಿಗಾಡಿನ ಕಡೆಯ ಸುಪ್ರನ್ನತೆಯೊಂದು ನಗರಕ್ಕೆ ಸಂದಂತೆ / ಬೆಳಗಾಗ ಚಳಿಯಲ್ಲಿ ಬಿಸಿನೀರಿನಲಿ ಮಿಂದಂತೆ / ಎದೆ ಸ್ವಚ್ಛಗೊಳ್ಳುತ್ತದೆ, ಹಗುರಕ್ಕೆ ಸಲ್ಲುತ್ತದೆ’– ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಪ್ರೊ. ಕೆ.ಎಸ್. ನಿಸಾರ್ ಅಹಮದ್ ಚಿತ್ರಿಸಿರುವ ರೀತಿ ಇದು. ಹೌದು, ಮಾಸ್ತಿ ಪ್ರಸನ್ನತೆಗೆ – ಮನುಷ್ಯಪ್ರೀತಿಗೆ ಇನ್ನೊಂದು ಹೆಸರು.<br /> <br /> ಬದುಕು ಹಾಗೂ ಬರಹ ಎರಡರಲ್ಲೂ ಮಾನವೀಯತೆಯನ್ನು ಕಾಣಿಸಿದ ‘ಅಪ್ಪಟ ಮನುಷ್ಯ’ ಅವರು. ಸಹಲೇಖಕರ ಸಂಕಷ್ಟಗಳಿಗೆ ಒದಗಿದ್ದು, ಕಿರಿಯ ಲೇಖಕರನ್ನು ಮಮತೆಯಿಂದ ಕಂಡಿದ್ದು– ಮಾಸ್ತಿ ಅವರ ಅಂತಃಕರಣಕ್ಕೆ ಅವರೇ ಸಾಟಿ.<br /> <br /> ಜೀವನಪ್ರೀತಿಯ ಕಾರಣದಿಂದಲೂ ಅವರು ಮುಖ್ಯರು. ಕೋಟು ತೊಟ್ಟು, ಕೊಡೆ ಹಿಡಿದು, ಪ್ರತಿ ಸಂಜೆ ಬೆಂಗಳೂರಿನ ಗಾಂಧಿಬಜಾರ್ನ ಕ್ಲಬ್ಗೆ ಹೋಗುತ್ತಿದ್ದ ಜೀವನಪ್ರೀತಿ ಅವರದು.<br /> <br /> ಈ ಜೀವನೋತ್ಸಾಹವನ್ನೇ– ‘ಕ್ಲಬ್ಬಿನಲಿ ನಿಶ್ಚಿಂತೆಯಾಗಿ ಎಲೆ ಕಲಸುವುದು / ಇಪ್ಪತ್ತೆಂಟನಾಡುವುದು – ನಡುವೆ ಅದೂ ಇದೂ / ಇಪ್ಪತ್ತೆಂಟನಾಡುವುದು’ ಎಂದು ನಿಸಾರರು ಚಿತ್ರಿಸಿದ್ದಾರೆ.<br /> <br /> ಅಂದಹಾಗೆ, ನಾಳೆ ಮಾಸ್ತಿ ಅವರ ಹುಟ್ಟುಹಬ್ಬ (1891–1968). ಜೂನ್ 6 ಅವರು ಹುಟ್ಟಿದ ದಿನವೂ ನಿಧನರಾದ ದಿನವೂ ಹೌದು. ಪ್ರಸ್ತುತ ಕನ್ನಡ ಸಾರಸ್ವತಲೋಕ ‘ಮಾಸ್ತಿಯವರ 125ನೇ ಜಯಂತಿ’ ಆಚರಿಸುತ್ತಿರುವ ಸಂದರ್ಭದಲ್ಲಿ ಇಲ್ಲಿನ ಚಿತ್ರಗಳು ಮಾಸ್ತಿಯವರ ವ್ಯಕ್ತಿತ್ವದ ಚೆಲುವನ್ನು ಸೂಚಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>