ಚಾಲಕನ ಅಜಾಗರೂಕತೆಯಿಂದಾಗಿ ಮೊನ್ನೆ ಶಿಂಷಾ ನದಿಗೆ ಬಸ್ ಬಿತ್ತು. ವಾಹನ ಚಾಲನೆ ಮಾಡುತ್ತ ಬಾಟಲಿ ನೀರು ಕುಡಿದದ್ದೆ ಇದಕ್ಕೆ ಕಾರಣ.
ಹೆದ್ದಾರಿಗಳಲ್ಲಿ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತಿರುತ್ತವೆ. ಸ್ವಲ್ಪ ಉದಾಸೀನ ಮಾಡಿದರೂ ಅಪಘಾತ ಸಂಭವಿಸುತ್ತದೆ.
ವಾಹನ ಚಾಲನೆ ಮಾಡುವಾಗ ಬಹಳಷ್ಟು ಚಾಲಕರು ಮೊಬೈಲ್ನಲ್ಲಿ ಮಾತನಾಡುವುದು, ಕುರುಕುಲು ತಿಂಡಿ ತಿನ್ನುವುದು, ನಿರ್ವಾಹಕರ ಜೊತೆ ಮಾತನಾಡುವುದು, ಬಾಟಲಲ್ಲಿ ನೀರು ಕುಡಿಯುವುದು, ಕಡ್ಡಿಪುಡಿ ಜಗಿಯುವುದು ಮಾಡುತ್ತಾರೆ.