ಬುಲಂದ್ಷಹರ್(ಉ.ಪ್ರ)(ಪಿಟಿಐ): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ರೋಗಿಗೆ ಅಡುಗೆಯವನೇ ಹೊಲಿಗೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ಬುಲಂದ್ ಷಹರ್ ಜಿಲ್ಲೆಯ ಪಹಸು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಡುಗೆಯವನು ಹಾಗೂ ವಾರ್ಡ್ ಬಾಯ್ ಇಬ್ಬರೂ ಸೇರಿ ರೋಗಿಗೆ ಹೊಲಿಗೆ ಹಾಕಿದ್ದಾರೆ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹಿರಿಯ ವೈದ್ಯಕೀಯ ಅಧಿಕಾರಿ ದೀಪಕ್ ಒಹ್ರಿ ತಿಳಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ವೈದ್ಯರನ್ನು ಅಮಾನತು ಮಾಡುವಂತೆ ದೀಪಕ್ ಅವರು ಶಿಫಾರಸು ಮಾಡಿದ್ದಾರೆ.