ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಬೆದರಿಕೆ: ದೂರು ದಾಖಲು

Last Updated 28 ಜುಲೈ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ ಮೂಲಕ ಸಾಮಾಜಿಕ ಕಾರ್ಯ­­ಕರ್ತೆಯೊಬ್ಬರಿಗೆ ಅತ್ಯಾ­ಚಾ­ರದ ಬೆದರಿಕೆ ಹಾಕಿದ ಆರೋಪದ ಮೇಲೆ ವಿ.ಆರ್‌.ಭಟ್‌ ಎಂಬುವರ ವಿರುದ್ಧ ಚಂದ್ರಾಲೇಔಟ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತೆ­ಯೊ­ಬ್ಬರು ‘ವೈಜ್ಞಾನಿಕ ಸಂಶೋಧನೆ, ಚಿಂತ­ನೆ–ಶ್ರಮ ಸಂಸ್ಕೃತಿ’ ವಿಷಯ ಕುರಿತು ಫೇಸ್‌­ಬುಕ್‌ ಖಾತೆಯಲ್ಲಿ ಭಾನು­ವಾರ ಬರೆ­ದಿದ್ದ ಬರಹಕ್ಕೆ ಭಟ್‌ ಅವರು ಅವ­ಹೇಳನಕಾರಿಯಾಗಿ ಪ್ರತಿಕ್ರಿ­ಯಿ­­ಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ನೀಡಿದ ದೂರು ಆಧರಿಸಿ ನಿಂದನೆ, ಅಪ­ರಾಧ ಸಂಚು ಮತ್ತು ಮಾಹಿತಿ ತಂತ್ರಜ್ಞಾನ ದುರು­ಪಯೋಗ­ಪಡಿಸಿ­ಕೊಂಡ ಆರೋಪದ ಮೇಲೆ ಭಟ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಾನಮತ್ತರಿಂದ ಸ್ನೇಹಿತನ ಮೇಲೆ ಹಲ್ಲೆ
ಪಾನಮತ್ತ ಯುವಕರು ಸ್ನೇಹಿತನಿಗೆ ಬಿಯರ್‌ ಬಾಟಲಿಗಳಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಭಾರತಿ­ನಗರ­ದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹಲ್ಲೆಗೊಳಗಾಗಿರುವ ಅಗಸ್ಟಿನ್‌ (28) ಎಂಬಾತನನ್ನು ಆಸ್ಪತ್ರೆಗೆ ದಾಖ­ಲಿಸ­­ಲಾಗಿದೆ. ಅಗಸ್ಟಿನ್‌ ಮತ್ತು ಆತನ ಸ್ನೇಹಿತರಾದ ನವೀನ್‌, ಪಾರ್ಥಿಬನ್‌ ಮತ್ತಿತರರು ಭಾರತಿನಗರದ ಮೆಮೊರಿ­ಯಲ್‌ ಉದ್ಯಾನದಲ್ಲಿ ರಾತ್ರಿ ಮದ್ಯ­ಪಾನ ಮಾಡಿದ್ದರು. ನಂತರ ಅವರ ನಡುವೆ ಜಗಳವಾಗಿ ನವೀನ್‌ ಹಾಗೂ ಪಾರ್ಥಿ­ಬನ್‌, ಆತನ ತಲೆಗೆ ಬಿಯರ್‌ ಬಾಟಲಿಯಿಂದ ಹೊಡೆದು ಪರಾರಿ­ಯಾ­ಗಿ­ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತಿನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT