ಬೆಂಗಳೂರು: ‘ಮತಗಟ್ಟೆಗಳ ಬಳಿಯ ಬಿಜೆಪಿ ಏಜೆಂಟ್ಗಳ ಟೆಂಟ್ನಲ್ಲಿ ಬಿಜೆಪಿ ನಾಯಕರ ಭಾವಚಿತ್ರ ಇರುವ ಬ್ಯಾನರ್ ಹಾಕುವ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಅವರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಆರೋಪಿಸಿದ್ದಾರೆ.
‘ಮತಗಟ್ಟೆಗಳ ಬಳಿಯಲ್ಲಿ ಅಭ್ಯರ್ಥಿಯ ಹೆಸರು, ಪಕ್ಷ ಹಾಗೂ ಚಿಹ್ನೆ ಇರುವ ಒಂದೇ ಬ್ಯಾನರ್ಗಳನ್ನು ಹಾಕಬಹುದು. ಬ್ಯಾನರ್ನಲ್ಲಿ ಭಾವಚಿತ್ರ ಹಾಕಬಹುದು’ ಎಂದು ಚುನಾವಣಾ ಆಯೋಗ ಮಾರ್ಗಸೂಚಿ ಹೊರಡಿಸಿದೆ.
ಆದರೆ, ಅನಂತಕುಮಾರ್ ಈ ಮಾರ್ಗಸೂಚಿ ಉಲ್ಲಂಘಿಸಿ ತನ್ನ ಭಾವಚಿತ್ರದ ಜೊತೆಗೆ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ಕೃಷ್ಣ ಅಡ್ವಾಣಿ ಅವರ ಭಾವಚಿತ್ರಗಳನ್ನು ಹಾಕಿದ್ದಾರೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.