<p>ಕನ್ನಡದ ಹಿರಿಯ ಲೇಖಕ ಮತ್ತು ಚಿಂತಕ ಡಾ. ಯು.ಆರ್. ಅನಂತಮೂರ್ತಿಯವರಿಗೆ ಅವರ ಒಂದು ರಾಜಕೀಯ ಅಭಿಪ್ರಾಯ ಮತ್ತು ತಮ್ಮ ವೈಚಾರಿಕ ಲೇಖನವೊಂದರಲ್ಲಿ ದಾಖಲಿಸಿದ ಒಂದು ಪ್ರಸಂಗವನ್ನು ನೆಪವಾಗಿಟ್ಟುಕೊಂಡು ಕರ್ನಾಟಕದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾನಸಿಕ ಕಿರುಕುಳ ನೀಡುತ್ತಿರುವ ಪ್ರವೃತ್ತಿ ಮುಂದುವರೆದಿರುವುದು ವಿಷಾದಕರ.<br /> <br /> ನಾವು ಕೆಲವರು ಇತ್ತೀಚೆಗೆ ಅನಂತಮೂರ್ತಿಯವರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲೂ ಅವರಿಗೆ ನಿಂದನಾ ಕರೆಗಳು ಬಂದಿದ್ದನ್ನೂ, ಅದರಿಂದ ಅನಂತಮೂರ್ತಿಯವರ ಕುಟುಂಬ ಅನುಭವಿಸುತ್ತಿರುವ ನೋವನ್ನು ಕಣ್ಣಾರೆ ಕಂಡು ಈ ಪತ್ರ ಬರೆಯುತ್ತಿದ್ದೇವೆ.<br /> <br /> ನಮ್ಮ ಸಂವಿಧಾನ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಅಭಿಪ್ರಾಯದ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿದೆ. ಅನಂತಮೂರ್ತಿಯವರೂ ಈ ದೇಶದ ಪ್ರಜೆಯಾಗಿ ಅದನ್ನು ಚಲಾಯಿಸಿದ್ದಾರೆ. ಮೋದಿಯವರನ್ನು ಕುರಿತ ಅವರ ಅಭಿಪ್ರಾಯ ತೀವ್ರವಾಗಿರಬಹುದು. ಆದರೆ ಅದು ಸಂವಿಧಾನ ಅಥವಾ ಸಭ್ಯತೆಯ ಚೌಕಟ್ಟನ್ನು ಮೀರಿರಲಿಲ್ಲ. ಮಾಧ್ಯಮಗಳು ತಮ್ಮ ಮಾತುಗಳನ್ನು ತಿರುಚಿ ಪ್ರಕಟಿಸಿವೆ ಎಂದು ಅವರು ಬಹು ಹಿಂದೆಯೇ ಸ್ಪಷ್ಟೀಕರಣವನ್ನು ನೀಡಿದ್ದಾರೆ.<br /> <br /> ಹಾಗೇ, ಇತ್ತೀಚೆಗೆ ಕನ್ನಡದ ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿಯವರು, ಬಸವಶ್ರೀ ಪ್ರಶಸ್ತಿ ಹೆಸರಿನಲ್ಲಿ ಅನಂತಮೂರ್ತಿಯವರನ್ನು ವಿವಾದಕ್ಕೀಡು ಮಾಡುವ ತಮ್ಮ ವಿಫಲ ಪ್ರಯತ್ನದ ನಂತರ ಈಗ ಮತ್ತೊಂದು ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿರುವುದು ಕನ್ನಡ ಸಾಹಿತ್ಯ- ಸಂಸ್ಕೃತಿಗಳ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಶೋಚನೀಯ ಸಂಗತಿಯಾಗಿದೆ.<br /> <br /> ಅವರು ಯಾವುದೋ ಸಮಾರಂಭದಲ್ಲಿ ಮೂಢನಂಬಿಕೆಗಳ ಬಗ್ಗೆ ಮಾತನಾಡುತ್ತಾ, ಅನಂತಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ದಾಖಲಿಸಿರುವ ತಮ್ಮ ಬಾಲ್ಯದ ಪ್ರಸಂಗವೊಂದನ್ನು ಅನಗತ್ಯವಾಗಿ ಮತ್ತು ತಪ್ಪಾಗಿ ಉಲ್ಲೇಖಿಸಿ ಅವರ ಬಗ್ಗೆ ಸಾಮಾನ್ಯ ಜನತೆಯಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಲು ಕಾರಣರಾಗಿದ್ದಾರೆ.<br /> <br /> ಸಂಪೂರ್ಣವಾಗಿ ವೈಯಕ್ತಿಕ ನೆಲೆಯ ಈ ಸೂಕ್ಷ್ಮ ಸಾಹಿತ್ಯಕ ನಿರೂಪಣೆಯು ಕಲಬುರ್ಗಿಯವರ ಅನುಚಿತ ರೀತಿಯ ಉಲ್ಲೇಖ ಮತ್ತು ಸ್ಥೂಲ ಮಾಧ್ಯಮ ವರದಿಗಾರಿಕೆಯಿಂದಾಗಿ ಒಂದು ಸಾರ್ವಜನಿಕ ದೈವಶ್ರದ್ಧೆಯ ಪ್ರಶ್ನೆಯಾಗಿ ಮಾರ್ಪಟ್ಟು ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ.<br /> <br /> ಇದು ಬೌದ್ಧಿಕ ವಿವೇಚನೆ, ಸೂಕ್ಷ್ಮ ಸಾಹಿತ್ಯಕ, -ಸಾಂಸ್ಕೃತಿಕ ಚರ್ಚೆಗಳಿಗೆ ಅನುಕೂಲಕರ ವಾತಾವರಣವಿಲ್ಲದ ಕೆಟ್ಟ ಕಾಲ. ಇದನ್ನರಿತು ನಮ್ಮ ಲೇಖಕ- ಚಿಂತಕರೂ, ಸಮಾನ ಮನಸ್ಕ ವಲಯಗಳಲ್ಲಿ ಮಾತ್ರ ಚರ್ಚೆಗೆ ಸಲ್ಲುವ ವಿಷಯಗಳನ್ನು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ತಂದು ಮಾಧ್ಯಮಗಳ ಮತ್ತು ಅವುಗಳ ಹಿಂದಿರುವ ಪ್ರತಿಗಾಮಿ ಶಕ್ತಿಗಳಿಗೆ ಆಹಾರ ಒದಗಿಸುವ ಸುದ್ದಿಶೂರತ್ವ ಮತ್ತು ಪ್ರಚಾರ ಪ್ರಿಯತೆಯಿಂದ ದೂರ ಉಳಿಯುವುದು ಒಳಿತೆಂದು ನಾವು ಭಾವಿಸುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದ ಹಿರಿಯ ಲೇಖಕ ಮತ್ತು ಚಿಂತಕ ಡಾ. ಯು.ಆರ್. ಅನಂತಮೂರ್ತಿಯವರಿಗೆ ಅವರ ಒಂದು ರಾಜಕೀಯ ಅಭಿಪ್ರಾಯ ಮತ್ತು ತಮ್ಮ ವೈಚಾರಿಕ ಲೇಖನವೊಂದರಲ್ಲಿ ದಾಖಲಿಸಿದ ಒಂದು ಪ್ರಸಂಗವನ್ನು ನೆಪವಾಗಿಟ್ಟುಕೊಂಡು ಕರ್ನಾಟಕದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾನಸಿಕ ಕಿರುಕುಳ ನೀಡುತ್ತಿರುವ ಪ್ರವೃತ್ತಿ ಮುಂದುವರೆದಿರುವುದು ವಿಷಾದಕರ.<br /> <br /> ನಾವು ಕೆಲವರು ಇತ್ತೀಚೆಗೆ ಅನಂತಮೂರ್ತಿಯವರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭದಲ್ಲೂ ಅವರಿಗೆ ನಿಂದನಾ ಕರೆಗಳು ಬಂದಿದ್ದನ್ನೂ, ಅದರಿಂದ ಅನಂತಮೂರ್ತಿಯವರ ಕುಟುಂಬ ಅನುಭವಿಸುತ್ತಿರುವ ನೋವನ್ನು ಕಣ್ಣಾರೆ ಕಂಡು ಈ ಪತ್ರ ಬರೆಯುತ್ತಿದ್ದೇವೆ.<br /> <br /> ನಮ್ಮ ಸಂವಿಧಾನ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಅಭಿಪ್ರಾಯದ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿದೆ. ಅನಂತಮೂರ್ತಿಯವರೂ ಈ ದೇಶದ ಪ್ರಜೆಯಾಗಿ ಅದನ್ನು ಚಲಾಯಿಸಿದ್ದಾರೆ. ಮೋದಿಯವರನ್ನು ಕುರಿತ ಅವರ ಅಭಿಪ್ರಾಯ ತೀವ್ರವಾಗಿರಬಹುದು. ಆದರೆ ಅದು ಸಂವಿಧಾನ ಅಥವಾ ಸಭ್ಯತೆಯ ಚೌಕಟ್ಟನ್ನು ಮೀರಿರಲಿಲ್ಲ. ಮಾಧ್ಯಮಗಳು ತಮ್ಮ ಮಾತುಗಳನ್ನು ತಿರುಚಿ ಪ್ರಕಟಿಸಿವೆ ಎಂದು ಅವರು ಬಹು ಹಿಂದೆಯೇ ಸ್ಪಷ್ಟೀಕರಣವನ್ನು ನೀಡಿದ್ದಾರೆ.<br /> <br /> ಹಾಗೇ, ಇತ್ತೀಚೆಗೆ ಕನ್ನಡದ ಹಿರಿಯ ವಿದ್ವಾಂಸ ಎಂ.ಎಂ. ಕಲಬುರ್ಗಿಯವರು, ಬಸವಶ್ರೀ ಪ್ರಶಸ್ತಿ ಹೆಸರಿನಲ್ಲಿ ಅನಂತಮೂರ್ತಿಯವರನ್ನು ವಿವಾದಕ್ಕೀಡು ಮಾಡುವ ತಮ್ಮ ವಿಫಲ ಪ್ರಯತ್ನದ ನಂತರ ಈಗ ಮತ್ತೊಂದು ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿರುವುದು ಕನ್ನಡ ಸಾಹಿತ್ಯ- ಸಂಸ್ಕೃತಿಗಳ ಆರೋಗ್ಯಕರ ಬೆಳವಣಿಗೆಯ ದೃಷ್ಟಿಯಿಂದ ಶೋಚನೀಯ ಸಂಗತಿಯಾಗಿದೆ.<br /> <br /> ಅವರು ಯಾವುದೋ ಸಮಾರಂಭದಲ್ಲಿ ಮೂಢನಂಬಿಕೆಗಳ ಬಗ್ಗೆ ಮಾತನಾಡುತ್ತಾ, ಅನಂತಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ದಾಖಲಿಸಿರುವ ತಮ್ಮ ಬಾಲ್ಯದ ಪ್ರಸಂಗವೊಂದನ್ನು ಅನಗತ್ಯವಾಗಿ ಮತ್ತು ತಪ್ಪಾಗಿ ಉಲ್ಲೇಖಿಸಿ ಅವರ ಬಗ್ಗೆ ಸಾಮಾನ್ಯ ಜನತೆಯಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಲು ಕಾರಣರಾಗಿದ್ದಾರೆ.<br /> <br /> ಸಂಪೂರ್ಣವಾಗಿ ವೈಯಕ್ತಿಕ ನೆಲೆಯ ಈ ಸೂಕ್ಷ್ಮ ಸಾಹಿತ್ಯಕ ನಿರೂಪಣೆಯು ಕಲಬುರ್ಗಿಯವರ ಅನುಚಿತ ರೀತಿಯ ಉಲ್ಲೇಖ ಮತ್ತು ಸ್ಥೂಲ ಮಾಧ್ಯಮ ವರದಿಗಾರಿಕೆಯಿಂದಾಗಿ ಒಂದು ಸಾರ್ವಜನಿಕ ದೈವಶ್ರದ್ಧೆಯ ಪ್ರಶ್ನೆಯಾಗಿ ಮಾರ್ಪಟ್ಟು ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ.<br /> <br /> ಇದು ಬೌದ್ಧಿಕ ವಿವೇಚನೆ, ಸೂಕ್ಷ್ಮ ಸಾಹಿತ್ಯಕ, -ಸಾಂಸ್ಕೃತಿಕ ಚರ್ಚೆಗಳಿಗೆ ಅನುಕೂಲಕರ ವಾತಾವರಣವಿಲ್ಲದ ಕೆಟ್ಟ ಕಾಲ. ಇದನ್ನರಿತು ನಮ್ಮ ಲೇಖಕ- ಚಿಂತಕರೂ, ಸಮಾನ ಮನಸ್ಕ ವಲಯಗಳಲ್ಲಿ ಮಾತ್ರ ಚರ್ಚೆಗೆ ಸಲ್ಲುವ ವಿಷಯಗಳನ್ನು ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ತಂದು ಮಾಧ್ಯಮಗಳ ಮತ್ತು ಅವುಗಳ ಹಿಂದಿರುವ ಪ್ರತಿಗಾಮಿ ಶಕ್ತಿಗಳಿಗೆ ಆಹಾರ ಒದಗಿಸುವ ಸುದ್ದಿಶೂರತ್ವ ಮತ್ತು ಪ್ರಚಾರ ಪ್ರಿಯತೆಯಿಂದ ದೂರ ಉಳಿಯುವುದು ಒಳಿತೆಂದು ನಾವು ಭಾವಿಸುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>