<p><strong>ನವದೆಹಲಿ (ಪಿಟಿಐ):</strong> ಇರಾಕ್ನ ಮೊಸುಲ್ ಪಟ್ಟಣದಲ್ಲಿ ಅಪಹೃತಗೊಂಡಿರುವ 40 ಭಾರತೀಯ ಕಾರ್ಮಿಕರು ಇರುವ ನೆಲೆಯನ್ನು ಇರಾಕ್ನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದಿರುವ ಕೇಂದ್ರ ಸರ್ಕಾರ, ಅಪಹೃತರ ಸುರಕ್ಷಿತ ಬಿಡುಗಡೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಗುರುವಾರ ಭರವಸೆ ನೀಡಿದೆ.</p>.<p>ಅಲ್ಲದೇ, ಅಪಹೃತರು ಸೇರಿದಂತೆ ಇರಾಕ್ನ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ 120 ಭಾರತೀಯ ಪ್ರಜೆಗಳಿದ್ದು, ಅವರು ಪಂಜಾಬ್, ಕೇರಳ ಹಾಗೂ ಇತರೆ ರಾಜ್ಯಗಳಿಗೆ ಸೇರಿದವರು ಎಂದೂ ಸರ್ಕಾರ ಹೇಳಿದೆ.</p>.<p>ಅಪಹೃತರ ಹಾಗೂ ಹಿಂಸಾ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ಬೆನ್ನಿಗೆ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪರಿಸ್ಥಿತಿ ನಿರ್ವಹಣಾ ತಂಡದೊಂದಿಗೆ ಎರಡು ಬಾರಿ ಸಭೆ ನಡೆಸಿದರು.</p>.<p>‘ಇತರೆ ರಾಷ್ಟ್ರಗಳ ಪ್ರಜೆಗಳೂ ಸೇರಿದಂತೆ ಅಪಹೃತಗೊಂಡ ಭಾರತೀಯ ಪ್ರಜೆಗಳನ್ನು ಬಂಧಿಸಿಟ್ಟಿರುವ ತಾಣವನ್ನು ಪತ್ತೆ ಮಾಡಿರುವುದಾಗಿ ಇರಾಕ್ನ ವಿದೇಶಾಂಗ ಸಚಿವಾಲಯ ನಮಗೆ ಮಾಹಿತಿ ನೀಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.</p>.<p>ಅಲ್ಲದೇ, ಅಪಹರಣಕಾರರಿಂದ ಹಣಕ್ಕಾಗಿ ಯಾವುದೇ ಬೇಡಿಕೆ ಬಂದಿಲ್ಲ. ಈ ಅಪಹರಣದ ಹಿಂದೆ ಇರಾಕಿನ ಮೊಸುಲ್ ಪಟ್ಟಣವನ್ನು ವಶಕ್ಕೆ ಪಡೆದಿರುವ ಸುನ್ನಿ ಉಗ್ರರ ಗುಂಪು ಐಎಸ್ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಕೈವಾಡ ಇದೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ ಎಂದೂ ಸರ್ಕಾರ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಇರಾಕ್ನ ಮೊಸುಲ್ ಪಟ್ಟಣದಲ್ಲಿ ಅಪಹೃತಗೊಂಡಿರುವ 40 ಭಾರತೀಯ ಕಾರ್ಮಿಕರು ಇರುವ ನೆಲೆಯನ್ನು ಇರಾಕ್ನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದಿರುವ ಕೇಂದ್ರ ಸರ್ಕಾರ, ಅಪಹೃತರ ಸುರಕ್ಷಿತ ಬಿಡುಗಡೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಗುರುವಾರ ಭರವಸೆ ನೀಡಿದೆ.</p>.<p>ಅಲ್ಲದೇ, ಅಪಹೃತರು ಸೇರಿದಂತೆ ಇರಾಕ್ನ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ 120 ಭಾರತೀಯ ಪ್ರಜೆಗಳಿದ್ದು, ಅವರು ಪಂಜಾಬ್, ಕೇರಳ ಹಾಗೂ ಇತರೆ ರಾಜ್ಯಗಳಿಗೆ ಸೇರಿದವರು ಎಂದೂ ಸರ್ಕಾರ ಹೇಳಿದೆ.</p>.<p>ಅಪಹೃತರ ಹಾಗೂ ಹಿಂಸಾ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ಬೆನ್ನಿಗೆ, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪರಿಸ್ಥಿತಿ ನಿರ್ವಹಣಾ ತಂಡದೊಂದಿಗೆ ಎರಡು ಬಾರಿ ಸಭೆ ನಡೆಸಿದರು.</p>.<p>‘ಇತರೆ ರಾಷ್ಟ್ರಗಳ ಪ್ರಜೆಗಳೂ ಸೇರಿದಂತೆ ಅಪಹೃತಗೊಂಡ ಭಾರತೀಯ ಪ್ರಜೆಗಳನ್ನು ಬಂಧಿಸಿಟ್ಟಿರುವ ತಾಣವನ್ನು ಪತ್ತೆ ಮಾಡಿರುವುದಾಗಿ ಇರಾಕ್ನ ವಿದೇಶಾಂಗ ಸಚಿವಾಲಯ ನಮಗೆ ಮಾಹಿತಿ ನೀಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.</p>.<p>ಅಲ್ಲದೇ, ಅಪಹರಣಕಾರರಿಂದ ಹಣಕ್ಕಾಗಿ ಯಾವುದೇ ಬೇಡಿಕೆ ಬಂದಿಲ್ಲ. ಈ ಅಪಹರಣದ ಹಿಂದೆ ಇರಾಕಿನ ಮೊಸುಲ್ ಪಟ್ಟಣವನ್ನು ವಶಕ್ಕೆ ಪಡೆದಿರುವ ಸುನ್ನಿ ಉಗ್ರರ ಗುಂಪು ಐಎಸ್ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಕೈವಾಡ ಇದೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ ಎಂದೂ ಸರ್ಕಾರ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>