ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌, ಶರಣ್ಯಾಗೆ ಪ್ರಶಸ್ತಿ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅರ್ಜುನ್‌ ಮರಿಯಪ್ಪ ಮತ್ತು ಮಹಾರಾಷ್ಟ್ರದ ಶರಣ್ಯ ಗರ್ವಾರೆ ಅವರು ಟಾಪ್‌ಸೀಡ್‌ ಟೆನಿಸ್‌ ಅಕಾಡೆಮಿ ಆಶ್ರಯದಲ್ಲಿ ನಡೆದ  14 ವರ್ಷದೊಳಗಿನವರ ಎಐಟಿಎ  ಚಾಂಪಿಯನ್‌ಷಿಪ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ಬುಧವಾರ ನಡೆದ  ಬಾಲಕರ ವಿಭಾಗದ ಫೈನಲ್‌  ಹೋರಾಟದಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕಿತ ಆಟಗಾರ ಅರ್ಜುನ್‌   7–6, 4–6, 6–2ರಲ್ಲಿ  ಕರ್ನಾಟಕದವರೇ ಆದ  ನಿತಿನ್‌ ನಾಗಾರ್ಜುನ ರೆಡ್ಡಿ ಅವರನ್ನು ಪರಾಭವಗೊಳಿಸಿದರು.

ಗೆದ್ದ ಶರಣ್ಯ:  12ನೇ ಶ್ರೇಯಾಂಕಿತ ಆಟಗಾರ್ತಿ ಮಹಾರಾಷ್ಟ್ರದ ಶರಣ್ಯ ಗರ್ವಾರೆ ಬಾಲಕಿಯರ ಸಿಂಗಲ್ಸ್‌ ವಿಭಾಗದ ಅಂತಿಮ ಘಟ್ಟದ ಪೈಪೋಟಿಯಲ್ಲಿ   6–3, 3–6, 6–2ರಲ್ಲಿ 7ನೇ  ಶ್ರೇಯಾಂಕ ಹೊಂದಿದ್ದ  ಕರ್ನಾಟಕದ ಪರ್ವಿ ಪಾಟೀಲ್‌ ಎದುರು ಗೆಲುವು ಪಡೆದರು.

ಪ್ರಗತಿ ಜೋಡಿಗೆ ಡಬಲ್ಸ್‌ ಗರಿ:  ಬಾಲಕಿಯರ ಡಬಲ್ಸ್‌ ವಿಭಾಗದ ಫೈನಲ್‌ ಪೈಪೋಟಿಯಲ್ಲಿ  ಕರ್ನಾಟಕದ  ಪ್ರಗತಿ ಮತ್ತು ಪ್ರತಿಭಾ ನಾರಾಯಣ್‌ 6–4, 2–6, 10–5ರಲ್ಲಿ ರಾಜ್ಯದವರೇ ಆದ  ಚೆಲ್ಸೀ ಸ್ಟೀಫನ್‌ ಮತ್ತು ಪರ್ವಿ ಪಾಟೀಲ್‌ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT