ಅಂದರೆ, ಕಟ್ಟಡದಲ್ಲಿ ಎರಡು ಮನೆಗಳಿದ್ದರೆ ಒಟ್ಟು ₹ 300 ಶುಲ್ಕ ತೆರಬೇಕಾಗುತ್ತದೆ. ಕೊಳವೆ ಬಾವಿ ಇರಲಿ ಬಿಡಲಿ, ಒಳಚರಂಡಿಗೆ ಬಿಡುವ ನೀರಿನ ಪ್ರಮಾಣ ಹೆಚ್ಚೂಕಡಿಮೆ ಒಂದೇ ಪ್ರಮಾಣದಲ್ಲಿ ಇರುತ್ತದೆ.
ಜಲಮಂಡಳಿಯವರು ಸಮರ್ಪಕವಾಗಿ ನೀರು ಸರಬರಾಜು ಮಾಡದೇ ಇರುವುದಕ್ಕೆ ತಾನೆ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ತೆಗೆಸಿ ಪಂಪನ್ನು ಅಳವಡಿಸಿರುವುದು? ಒಂದೊಮ್ಮೆ ಜನ ಜಲಮಂಡಳಿಯಿಂದ ನೀರಿನ ಸಂಪರ್ಕವನ್ನೇ ಪಡೆಯದೆ ತಾವು ಉಪಯೋಗಿಸಿದ ಕೊಳವೆಬಾವಿಯ ನೀರನ್ನು ಒಳಚರಂಡಿಗೆ ಬಿಟ್ಟರೆ ಆಗ ಈ ಶುಲ್ಕ ವಿಧಿಸುವುದು ನ್ಯಾಯ.
ಸೌರಶಕ್ತಿಯಿಂದ ನೀರು ಕಾಯಿಸುವ ವ್ಯವಸ್ಥೆಯಿದ್ದರೆ, ವಿದ್ಯುತ್ ಮಂಡಳಿ ಶುಲ್ಕದಲ್ಲಿ ರಿಯಾಯಿತಿ ಕೊಡುತ್ತಿದೆ. ಆದರೆ ಜಲಮಂಡಳಿಯೂ ಇದೇ ರೀತಿ ರಿಯಾಯಿತಿ ಕೊಡುವ ಬದಲು ಹೆಚ್ಚುವರಿ ಶುಲ್ಕ ವಿಧಿಸುವುದು ಅವೈಜ್ಞಾನಿಕ ಮತ್ತು ಅನ್ಯಾಯ.