<p><strong>ಹೈದರಾಬಾದ್, ನವದೆಹಲಿ (ಪಿಟಿಐ): </strong>ಆಂಧ್ರಪ್ರದೇಶ ವಿಭಜಿಸುವ ಕೇಂದ್ರ ಸಂಪುಟದ ನಿರ್ಧಾರ ವಿರೋಧಿಸಿ ರಾಜ್ಯದ ವಿದು್ಯತ್ ವಿತರಣಾ ಕಂಪೆನಿಗಳ ನೌಕರರು ನಡೆಸುತ್ತಿರುವ ಅನಿರ್ದಿ ಷ್ಟಾವಧಿ ಮುಷ್ಕರ ಸೋಮ ವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸೀಮಾಂಧ್ರ ಪ್ರದೇಶ ಕತ್ತಲೆಯಲ್ಲಿ ಮುಳುಗಿ ಜನಜೀವನ ಅಸ್ತವ್ಯಸ್ತವಾಗಿದೆ.<br /> <br /> ಈ ನಡುವೆ, ಸೀಮಾಂಧ್ರ ಭಾಗದ ನಾಲ್ವರು ಕೇಂದ್ರ ಸಚಿವರು ಸೋಮವಾರ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸ್ವೀಕರಿಸಲು ಪಟು್ಟಹಿಡಿದರಾದರೂ ಈ ಕುರಿತು ಪ್ರಧಾನಿಯಿಂದ ಯಾವುದೇ ಭರವಸೆ ಸಿಗಲಿಲ್ಲ.<br /> <br /> ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಎಂ.ಎಂ. ಪಲ್ಲಂ ರಾಜು, ಪ್ರವಾಸೋದ್ಯಮ ಸಚಿವ ಕೆ. ಚಿರಂಜೀವಿ, ವಾಣಿಜ್ಯ ಖಾತೆ ರಾಜ್ಯ ಸಚಿವೆ ಡಿ. ಪುರಂದೇಶ್ವರಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸೂರ್ಯಪ್ರಕಾಶ್ ರೆಡ್ಡಿ ಅವರುಗಳೇ ರಾಜೀನಾಮೆ ನೀಡಿದ ಸಚಿವರು. ಈ ಎಲ್ಲರೂ ತಮ್ಮ ಕಚೇರಿಗೆ ಹಾಜರಾಗದಿರಲು ನಿರ್ಧರಿ ಸಿದ್ದಾರೆ. ರಾಜೀನಾಮೆ ಸ್ವೀಕರಿಸುವ ಕುರಿತು ಪ್ರಧಾನಿ ಯಾವುದೇ ಭರವಸೆ ನೀಡದೆ ಈ ಕುರಿತು ಪರಿಶೀಲನೆ ನಡೆಸುವೆ ಎಂದಷ್ಟೇ ತಿಳಿಸಿದ್ದಾರೆ.<br /> <br /> ಆಂಧ್ರಪ್ರದೇಶದಲಿ್ಲ ಉಂಟಾಗಿರುವ ಅಶಾಂತಿಯ ಕುರಿತು ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಪ್ರಧಾನಿ ಅವರನು್ನ ಭೇಟಿ ಮಾಡಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.<br /> <br /> ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಆಂಧ್ರದ ಎಲ್ಲ ಭಾಗದವರಿಗೆ ನ್ಯಾಯ ದಕ್ಕುವ ಹಾಗೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಲಾಗುವುದು; ಎಲ್ಲರ ಹಿತಾಸಕ್ತಿ ಕಾಯಲಾಗುವುದು ಎಂದರು.<br /> <br /> <strong>ಮುಂದುವರಿದ ಕರ್ಫೂ:</strong>ಮುಷ್ಕರದ ಬಿಸಿ ರಾಜಧಾನಿ ಹೈದರಾಬಾದ್ಗೂ ತಟ್ಟಿದೆ. ಹಿಂಸಾಕೃತ್ಯಗಳು ನಡೆದ ವಿಜಯನಗರಂ ಪಟ್ಟಣದಲ್ಲಿ ಸೋಮವಾರವೂ ಸಿ್ಥತಿ ತಿಳಿಯಾಗದ ಕಾರಣ ಕರ್ಫೂ ಮುಂದುವರಿಸಲಾಗಿದೆ.<br /> <br /> ನೌಕರರ ಮುಷ್ಕರದಿಂದ ವಿದು್ಯತ್ ಉತ್ಪಾದನೆ ಹಾಗೂ ವಿತರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ನೂರಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಇದರಿಂದಾಗಿ ಹಲವಾರು ರೈಲು ಗಳ ಸಂಚಾರವನ್ನು ರದು್ದಮಾಡಲಾಗಿದ್ದು ತಿರುಪತಿ ಯಲ್ಲಿ ನಡೆಯುತ್ತಿರುವ ‘ಬ್ರಹ್ಮೋತ್ಸವ’ ಸ್ಥಗಿತಗೊಳು್ಳವ ಸಾಧ್ಯತೆಯೂ ಇದೆ ಎನ್ನಲಾಗಿದೆ.<br /> 6,090 ಮೆಗಾವಾಟ್ ವಿದು್ಯತ್ ಉತ್ಪಾದನೆಯ ಬದಲು ಕೇವಲ 2,990 ಮೆಗಾವಾಟ್ ವಿದು್ಯತ್ ಉತ್ಪಾದನೆಯಾಗಿದು್ದ ಎಲ್ಲೆಡೆ ಕೊರತೆ ಉಂಟಾಗಿದೆ.<br /> <br /> ಪೂರೈಕೆ ಸಮಸ್ಯೆಯಿಂದಾಗಿ ರಾಜ್ಯದ ಹಲವಾರು ಗಾ್ಯಸ್ ಆಧಾರಿತ ವಿದು್ಯತ್ ಘಟಕಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಸಮಸೆ್ಯ ಬಿಗಡಾ ಯಿಸಿದ್ದು ಮುಷ್ಕರ ನಿರತ ನೌಕರರ ಪ್ರತಿನಿಧಿಗಳ ಜತೆ ವಿದು್ಯತ್ ಖಾತೆ ಅಧಿಕಾರಿಗಳು ಹೈದರಾ ಬಾದ್ನಲ್ಲಿ ಮಾತುಕತೆ ನಡೆಸಿದರು.<br /> <br /> <strong>ನಿಲ್ಲದ ಪ್ರತಿಭಟನೆ</strong>: ಈ ನಡುವೆ ವಿಭಜನೆ ವಿರೋಧಿಸಿ ಸೀಮಾಂಧ್ರ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಸೋಮವಾರವೂ ಪ್ರತಿಭಟನೆಗಳು ನಡೆದವು. ಹಲವೆಡೆ ವಿದ್ಯಾರ್ಥಿಗಳು ಬೀದಿಗಿಳಿದು ಮುಷ್ಕರದಲ್ಲಿ ಪಾಲೊ್ಗಂಡರು. ಸುಮಾರು 6 ಲಕ್ಷ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಮುಷ್ಕರದಲ್ಲಿ ಪಾಲೊ್ಗಂಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಇದೇ 9 ರಂದು ಮುಷ್ಕರನಿರತ ನೌಕರರ ಜತೆ ಸಮಾಲೋಚನೆ ನಡೆಸಲಿದ್ದಾರೆ.<br /> <br /> ವಿಭಜನೆ ವಿರೋಧಿಸಿ ಈಗಾಗಲೇ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ಮೋಹನ್ ರೆಡ್ಡಿ ಕಳೆದ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.<br /> <br /> <strong>ಚಂದ್ರಬಾಬು ಆಮರಣ ನಿರಶನ:</strong> ಆಂಧ್ರವನ್ನು ಹೋಳು ಮಾಡುವ ಕೇಂದ್ರದ ತೀರ್ಮಾನದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರ ಇಲ್ಲಿ ಆಮರಣ ನಿರಶನ ಆರಂಭಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ನಾಯ್ಡು, ‘ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯದಾಟ ಆಡುತ್ತಿದೆ. ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದ ಜನ ರಾಜಕೀಯ ವ್ಯವಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನೇ ಕಳೆದುಕೊಂಡಿದಾ್ದರೆ’ ಎಂದು ಟೀಕಿಸಿದರು.<br /> <br /> ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಪರ ಇದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ‘ನನಗೆ ರಾಜ್ಯದ ಮೂರು ಭಾಗಗಳೂ ಅಷ್ಟೆ ಮುಖ್ಯ. ಮೂವರು ಮಕ್ಕಳನ್ನು ಹೊಂದಿರುವ ತಂದೆ ಹೇಗೆ ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುತ್ತಾನೊ ಹಾಗೆ ನಾನೂ ಸಹ’ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್, ನವದೆಹಲಿ (ಪಿಟಿಐ): </strong>ಆಂಧ್ರಪ್ರದೇಶ ವಿಭಜಿಸುವ ಕೇಂದ್ರ ಸಂಪುಟದ ನಿರ್ಧಾರ ವಿರೋಧಿಸಿ ರಾಜ್ಯದ ವಿದು್ಯತ್ ವಿತರಣಾ ಕಂಪೆನಿಗಳ ನೌಕರರು ನಡೆಸುತ್ತಿರುವ ಅನಿರ್ದಿ ಷ್ಟಾವಧಿ ಮುಷ್ಕರ ಸೋಮ ವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸೀಮಾಂಧ್ರ ಪ್ರದೇಶ ಕತ್ತಲೆಯಲ್ಲಿ ಮುಳುಗಿ ಜನಜೀವನ ಅಸ್ತವ್ಯಸ್ತವಾಗಿದೆ.<br /> <br /> ಈ ನಡುವೆ, ಸೀಮಾಂಧ್ರ ಭಾಗದ ನಾಲ್ವರು ಕೇಂದ್ರ ಸಚಿವರು ಸೋಮವಾರ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸ್ವೀಕರಿಸಲು ಪಟು್ಟಹಿಡಿದರಾದರೂ ಈ ಕುರಿತು ಪ್ರಧಾನಿಯಿಂದ ಯಾವುದೇ ಭರವಸೆ ಸಿಗಲಿಲ್ಲ.<br /> <br /> ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಎಂ.ಎಂ. ಪಲ್ಲಂ ರಾಜು, ಪ್ರವಾಸೋದ್ಯಮ ಸಚಿವ ಕೆ. ಚಿರಂಜೀವಿ, ವಾಣಿಜ್ಯ ಖಾತೆ ರಾಜ್ಯ ಸಚಿವೆ ಡಿ. ಪುರಂದೇಶ್ವರಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸೂರ್ಯಪ್ರಕಾಶ್ ರೆಡ್ಡಿ ಅವರುಗಳೇ ರಾಜೀನಾಮೆ ನೀಡಿದ ಸಚಿವರು. ಈ ಎಲ್ಲರೂ ತಮ್ಮ ಕಚೇರಿಗೆ ಹಾಜರಾಗದಿರಲು ನಿರ್ಧರಿ ಸಿದ್ದಾರೆ. ರಾಜೀನಾಮೆ ಸ್ವೀಕರಿಸುವ ಕುರಿತು ಪ್ರಧಾನಿ ಯಾವುದೇ ಭರವಸೆ ನೀಡದೆ ಈ ಕುರಿತು ಪರಿಶೀಲನೆ ನಡೆಸುವೆ ಎಂದಷ್ಟೇ ತಿಳಿಸಿದ್ದಾರೆ.<br /> <br /> ಆಂಧ್ರಪ್ರದೇಶದಲಿ್ಲ ಉಂಟಾಗಿರುವ ಅಶಾಂತಿಯ ಕುರಿತು ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಪ್ರಧಾನಿ ಅವರನು್ನ ಭೇಟಿ ಮಾಡಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.<br /> <br /> ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಆಂಧ್ರದ ಎಲ್ಲ ಭಾಗದವರಿಗೆ ನ್ಯಾಯ ದಕ್ಕುವ ಹಾಗೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಲಾಗುವುದು; ಎಲ್ಲರ ಹಿತಾಸಕ್ತಿ ಕಾಯಲಾಗುವುದು ಎಂದರು.<br /> <br /> <strong>ಮುಂದುವರಿದ ಕರ್ಫೂ:</strong>ಮುಷ್ಕರದ ಬಿಸಿ ರಾಜಧಾನಿ ಹೈದರಾಬಾದ್ಗೂ ತಟ್ಟಿದೆ. ಹಿಂಸಾಕೃತ್ಯಗಳು ನಡೆದ ವಿಜಯನಗರಂ ಪಟ್ಟಣದಲ್ಲಿ ಸೋಮವಾರವೂ ಸಿ್ಥತಿ ತಿಳಿಯಾಗದ ಕಾರಣ ಕರ್ಫೂ ಮುಂದುವರಿಸಲಾಗಿದೆ.<br /> <br /> ನೌಕರರ ಮುಷ್ಕರದಿಂದ ವಿದು್ಯತ್ ಉತ್ಪಾದನೆ ಹಾಗೂ ವಿತರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ನೂರಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಇದರಿಂದಾಗಿ ಹಲವಾರು ರೈಲು ಗಳ ಸಂಚಾರವನ್ನು ರದು್ದಮಾಡಲಾಗಿದ್ದು ತಿರುಪತಿ ಯಲ್ಲಿ ನಡೆಯುತ್ತಿರುವ ‘ಬ್ರಹ್ಮೋತ್ಸವ’ ಸ್ಥಗಿತಗೊಳು್ಳವ ಸಾಧ್ಯತೆಯೂ ಇದೆ ಎನ್ನಲಾಗಿದೆ.<br /> 6,090 ಮೆಗಾವಾಟ್ ವಿದು್ಯತ್ ಉತ್ಪಾದನೆಯ ಬದಲು ಕೇವಲ 2,990 ಮೆಗಾವಾಟ್ ವಿದು್ಯತ್ ಉತ್ಪಾದನೆಯಾಗಿದು್ದ ಎಲ್ಲೆಡೆ ಕೊರತೆ ಉಂಟಾಗಿದೆ.<br /> <br /> ಪೂರೈಕೆ ಸಮಸ್ಯೆಯಿಂದಾಗಿ ರಾಜ್ಯದ ಹಲವಾರು ಗಾ್ಯಸ್ ಆಧಾರಿತ ವಿದು್ಯತ್ ಘಟಕಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಸಮಸೆ್ಯ ಬಿಗಡಾ ಯಿಸಿದ್ದು ಮುಷ್ಕರ ನಿರತ ನೌಕರರ ಪ್ರತಿನಿಧಿಗಳ ಜತೆ ವಿದು್ಯತ್ ಖಾತೆ ಅಧಿಕಾರಿಗಳು ಹೈದರಾ ಬಾದ್ನಲ್ಲಿ ಮಾತುಕತೆ ನಡೆಸಿದರು.<br /> <br /> <strong>ನಿಲ್ಲದ ಪ್ರತಿಭಟನೆ</strong>: ಈ ನಡುವೆ ವಿಭಜನೆ ವಿರೋಧಿಸಿ ಸೀಮಾಂಧ್ರ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಸೋಮವಾರವೂ ಪ್ರತಿಭಟನೆಗಳು ನಡೆದವು. ಹಲವೆಡೆ ವಿದ್ಯಾರ್ಥಿಗಳು ಬೀದಿಗಿಳಿದು ಮುಷ್ಕರದಲ್ಲಿ ಪಾಲೊ್ಗಂಡರು. ಸುಮಾರು 6 ಲಕ್ಷ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಮುಷ್ಕರದಲ್ಲಿ ಪಾಲೊ್ಗಂಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಇದೇ 9 ರಂದು ಮುಷ್ಕರನಿರತ ನೌಕರರ ಜತೆ ಸಮಾಲೋಚನೆ ನಡೆಸಲಿದ್ದಾರೆ.<br /> <br /> ವಿಭಜನೆ ವಿರೋಧಿಸಿ ಈಗಾಗಲೇ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ಮೋಹನ್ ರೆಡ್ಡಿ ಕಳೆದ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.<br /> <br /> <strong>ಚಂದ್ರಬಾಬು ಆಮರಣ ನಿರಶನ:</strong> ಆಂಧ್ರವನ್ನು ಹೋಳು ಮಾಡುವ ಕೇಂದ್ರದ ತೀರ್ಮಾನದ ವಿರುದ್ಧ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರ ಇಲ್ಲಿ ಆಮರಣ ನಿರಶನ ಆರಂಭಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ನಾಯ್ಡು, ‘ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯದಾಟ ಆಡುತ್ತಿದೆ. ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದ ಜನ ರಾಜಕೀಯ ವ್ಯವಸ್ಥೆಯ ಮೇಲಿಟ್ಟಿರುವ ವಿಶ್ವಾಸವನ್ನೇ ಕಳೆದುಕೊಂಡಿದಾ್ದರೆ’ ಎಂದು ಟೀಕಿಸಿದರು.<br /> <br /> ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಪರ ಇದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ‘ನನಗೆ ರಾಜ್ಯದ ಮೂರು ಭಾಗಗಳೂ ಅಷ್ಟೆ ಮುಖ್ಯ. ಮೂವರು ಮಕ್ಕಳನ್ನು ಹೊಂದಿರುವ ತಂದೆ ಹೇಗೆ ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುತ್ತಾನೊ ಹಾಗೆ ನಾನೂ ಸಹ’ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>