<p><strong>ಬೆಂಗಳೂರು:</strong> ‘ಆರ್ಥಿಕ ಸಮಾನತೆ ಸಾಧಿಸುವುದು ದೇಶದ ಮುಂದಿರುವ ಬಹುದೊಡ್ಡ ಸವಾಲು’ ಎಂದು ಪತ್ರಕರ್ತರೂ ಆಗಿರುವ ರಾಜ್ಯಸಭಾ ಸದಸ್ಯ ಎಂ.ಜೆ. ಅಕ್ಬರ್ ತಿಳಿಸಿದರು.<br /> <br /> ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಆಧುನಿಕತೆಗೆ ಇರುವ ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಈಗಲೂ ಸುಮಾರು 5 ಕೋಟಿಗೂ ಹೆಚ್ಚು ಜನರ ತಲೆ ಮೇಲೆ ಸೂರಿಲ್ಲ. ಹಾಗಾಗಿ ಆರ್ಥಿಕ ಸಮಾನತೆಯ ಗುರಿ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೂ ಇದರ ಬಗ್ಗೆ ಆಶಾವಾದಿಯಾಗಿದ್ದೇನೆ’ ಎಂದರು.<br /> <br /> ‘ಆರ್ಥಿಕ ಸಮಾನತೆಯ ಜೊತೆಗೇ ಸ್ವಾತಂತ್ರ್ಯ, ಸಮಾನತೆಯಲ್ಲಿ ನಂಬಿಕೆ ಮತ್ತು ಲಿಂಗ ಸಮಾನತೆ ಇವು ಆಧುನಿಕತೆಗೆ ಅಗತ್ಯವಾಗಿ ಬೇಕಾಗಿರುವ ಪ್ರಮುಖ ಅಂಶಗಳು’ ಎಂದೂ ಹೇಳಿದರು.<br /> <br /> ‘ವೈಯಕ್ತಿಕ ಮತ್ತು ಸಾಮೂಹಿಕ ಸ್ವಾತಂತ್ರ್ಯ ಬಹುಮುಖ್ಯವಾದ ಸಂಗತಿಗಳು. ಅವುಗಳು ಇಲ್ಲದೇ ಹೋದರೆ ಆಧುನಿಕತೆಗೆ ಯಾವುದೇ ಅರ್ಥವಿಲ್ಲ’ ಎಂದರು.<br /> <br /> ‘ಚೀನಾ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಯಶಸ್ಸು ಕಂಡಿರಬಹುದು. ಆದರೆ ಅಲ್ಲಿ ಆಧುನಿಕತೆಯೇ ಇಲ್ಲ. ಕಾರಣ ಸಮಾನತೆಯಲ್ಲಿ ಅವರಿಗೆ ನಂಬಿಕೆ ಇಲ್ಲದಿರುವುದು’ ಎಂದು ಹೇಳಿದರು.<br /> <br /> ‘ಲಿಂಗ ಸಮಾನತೆಯೂ ಅಷ್ಟೇ ಮುಖ್ಯವಾದುದು. ಲಿಂಗ ಸಮಾನತೆಯಿಲ್ಲದ ರಾಷ್ಟ್ರದಲ್ಲಿ ಆಧುನಿಕತೆ ಕಾಣಲು ಸಾಧ್ಯವಿಲ್ಲ. ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಲಿಂಗ ಸಮಾನತೆಯೇ ಇಲ್ಲದಿರುವುದನ್ನು ನೋಡುತ್ತೇವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಆರ್ಥಿಕ ಸಮಾನತೆ ಸಾಧಿಸುವುದು ದೇಶದ ಮುಂದಿರುವ ಬಹುದೊಡ್ಡ ಸವಾಲು’ ಎಂದು ಪತ್ರಕರ್ತರೂ ಆಗಿರುವ ರಾಜ್ಯಸಭಾ ಸದಸ್ಯ ಎಂ.ಜೆ. ಅಕ್ಬರ್ ತಿಳಿಸಿದರು.<br /> <br /> ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಆಧುನಿಕತೆಗೆ ಇರುವ ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಈಗಲೂ ಸುಮಾರು 5 ಕೋಟಿಗೂ ಹೆಚ್ಚು ಜನರ ತಲೆ ಮೇಲೆ ಸೂರಿಲ್ಲ. ಹಾಗಾಗಿ ಆರ್ಥಿಕ ಸಮಾನತೆಯ ಗುರಿ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೂ ಇದರ ಬಗ್ಗೆ ಆಶಾವಾದಿಯಾಗಿದ್ದೇನೆ’ ಎಂದರು.<br /> <br /> ‘ಆರ್ಥಿಕ ಸಮಾನತೆಯ ಜೊತೆಗೇ ಸ್ವಾತಂತ್ರ್ಯ, ಸಮಾನತೆಯಲ್ಲಿ ನಂಬಿಕೆ ಮತ್ತು ಲಿಂಗ ಸಮಾನತೆ ಇವು ಆಧುನಿಕತೆಗೆ ಅಗತ್ಯವಾಗಿ ಬೇಕಾಗಿರುವ ಪ್ರಮುಖ ಅಂಶಗಳು’ ಎಂದೂ ಹೇಳಿದರು.<br /> <br /> ‘ವೈಯಕ್ತಿಕ ಮತ್ತು ಸಾಮೂಹಿಕ ಸ್ವಾತಂತ್ರ್ಯ ಬಹುಮುಖ್ಯವಾದ ಸಂಗತಿಗಳು. ಅವುಗಳು ಇಲ್ಲದೇ ಹೋದರೆ ಆಧುನಿಕತೆಗೆ ಯಾವುದೇ ಅರ್ಥವಿಲ್ಲ’ ಎಂದರು.<br /> <br /> ‘ಚೀನಾ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಯಶಸ್ಸು ಕಂಡಿರಬಹುದು. ಆದರೆ ಅಲ್ಲಿ ಆಧುನಿಕತೆಯೇ ಇಲ್ಲ. ಕಾರಣ ಸಮಾನತೆಯಲ್ಲಿ ಅವರಿಗೆ ನಂಬಿಕೆ ಇಲ್ಲದಿರುವುದು’ ಎಂದು ಹೇಳಿದರು.<br /> <br /> ‘ಲಿಂಗ ಸಮಾನತೆಯೂ ಅಷ್ಟೇ ಮುಖ್ಯವಾದುದು. ಲಿಂಗ ಸಮಾನತೆಯಿಲ್ಲದ ರಾಷ್ಟ್ರದಲ್ಲಿ ಆಧುನಿಕತೆ ಕಾಣಲು ಸಾಧ್ಯವಿಲ್ಲ. ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಲಿಂಗ ಸಮಾನತೆಯೇ ಇಲ್ಲದಿರುವುದನ್ನು ನೋಡುತ್ತೇವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>