ತನಿಖೆಗೆ ಸಮಿತಿ ನೇಮಕ
ನವದೆಹಲಿ: ರಾಮ್ಪಾಲ್ ಆಶ್ರಮದಲ್ಲಿ ಪೊಲೀಸರ ಲಾಠಿ ಪ್ರಹಾರಕ್ಕೆ ಮಾಧ್ಯಮಪ್ರತಿನಿಧಗಳು ಗಾಯಗೊಂಡಿರುವ ಪ್ರಕರಣವನ್ನು ತನಿಖೆಗೆ ಒಳಪಡಿಸುವುದಕ್ಕೆ ಭಾರತೀಯ ಪತ್ರಿಕಾ ಮಂಡಳಿಯು (ಪಿಸಿಐ) ಸತ್ಯ ಶೋಧನಾ ಸಮಿತಿ ರಚಿಸಿದೆ. ‘ರಾಮ್ಪಾಲ್ ಆಶ್ರಮದಲ್ಲಿ ನಡೆದ ಸಂಘರ್ಷದಲ್ಲಿ ಕೆಲವು ಮಾಧ್ಯಮಪ್ರತಿನಿಧಿಗಳ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವ ಕುರಿತು ಬಂದ ವರದಿಯನ್ನು ನಾನು ಪರಿಶೀಲಿಸಿದ್ದೇನೆ’ ಎಂದು ಪಿಸಿಐ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಟ್ಜು ಹೇಳಿದ್ದಾರೆ.
‘ಇದು ಮೂಲಭೂತ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಸಂದೀಪ್ ಶಂಕರ್, ಕೊಸುರಿ ಅಮರ್ನಾಥ್, ರಾಜೀವ್ ರಂಜನ್ ನಾಗ್ ಹಾಗೂ ಕೃಷ್ಣಪ್ರಸಾದ್ ಅವರು ಸತ್ಯಶೋಧನಾ ಸಮಿತಿ ಸದಸ್ಯರು.