ನವದೆಹಲಿ (ಪಿಟಿಐ/ಐಎಎನ್ಎಸ್): ಕೇರಳದ ಅನೇಕ ಕಡೆ ಗುರುವಾರ ಉತ್ತಮ ಮಳೆಯಾಗಿದೆ. ಆದರೆ ಇದು ಮುಂಗಾರು ಮಳೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಈ ನಡುವೆ ಹವಾಮಾನ ಇಲಾಖೆಯು, ‘ನೈರುತ್ಯ ಮುಂಗಾರು ಶುಕ್ರವಾರ ಕೇರಳ ಪ್ರವೇಶಿಸುವುದಕ್ಕೆ ಪೂರಕವಾದ ವಾತಾವರಣ ಇದೆ’ ಎಂದು ತಿಳಿಸಿದೆ.
‘ಮುಂದಿನ 24 ಗಂಟೆಗಳ ಅವಧಿಯೊಳಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಿ ನಂತರ ಅರಬ್ಬಿ ಸಮುದ್ರದ ದಕ್ಷಿಣ ಭಾಗ, ಮಾಲ್ಡೀವ್ಸ್್ ಕೊಮೊರಿನ್, ತಮಿಳುನಾಡು, ಬಂಗಾಳ ಕೊಲ್ಲಿಯೆಡೆಗೆ ಮುಂದುವರಿಯಲು ಅನುಕೂಲಕರವಾದ ವಾತಾವರಣ ಇದೆ’ ಎಂದು ಇಲಾಖೆ ಹೇಳಿದೆ.