ಶಿಡ್ಲಘಟ್ಟ: ಎರಡೂವರೆ ವರ್ಷದ ಬಾಲಕನೊಬ್ಬ ಚಾಕೋಲೇಟ್ನೊಂದಿಗೆ ಬಂದ ರಿಂಗನ್ನು ನುಂಗಿದ್ದು, ಶ್ವಾಸಕೋಶದಲ್ಲಿ ಸಿಕ್ಕಿಹಾಕಿಂಡ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಾರ್ಡನ್ ರಸ್ತೆಯ ದರ್ಗಾ ಮೊಹಲ್ಲಾದ ವಾಸಿ ಜಬೀವುಲ್ಲಾ ಅವರ ಮಗ ಶಹಬಾಸ್ ಉಂಗುರ ನುಂಗಿದ್ದಾನೆ. ‘ಪೇಟುರಾಮ್’ ಎಂಬ ಹೆಸರಿನ ₨ 2 ಚಾಕೋಲೇಟ್ನೊಂದಿಗೆ ಉಂಗುರ, ದಾರ, ಗೊಂಬೆ ಉಚಿತವಾಗಿ ನೀಡಲಾಗುತ್ತಿದ್ದು ಎಳೆ ಮಕ್ಕಳು ಅರಿಯದೇ ನುಂಗಿ ಅನಾಹುತ ಮಾಡಿಕೊಳ್ಳುವಂತಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸ್ರೇ ತೆಗೆದ ವೈದ್ಯರು ಉಂಗರವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಬೇಕೆಂದು ತಿಳಿಸಿದ್ದಾರೆ.
ಮಗುವಿನ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ತಮಗೆ ಸಹಾಯ ಮಾಡುವಂತೆ ಹಾಗೂ ಈ ರೀತಿಯ ಅನಾಹುತ ಬೇರೆ ಮಕ್ಕಳಿಗಾಗದಂತೆ ಈ ಚಾಕೋಲೇಟ್ ನಿಷೇಧಿಸಬೇಕು. ಈ ರೀತಿಯಾದ ಚಾಕಲೇಟ್ಗಳನ್ನು ತಯಾರಿಸುವ ಕಂಪೆನಿ ಮೇಲೆ ಸೂಕ್ತ ಕ್ರಮ ಜರುಗಿಸಿ ಮುಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಈ ರೀತಿಯ ಚಾಕೋಲೇಟ್ ತಯಾರಿಕಾ ಕಂಪೆನಿ ಹಾಗೂ ಮಾರಾಟಗಾರರ ವಿರುದ್ಧ ಮೇಲಧಿಕಾರಿಗೆ ತಿಳಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.